ಪಡುಬಿದ್ರಿ : ಕಲಾಬೊಳ್ಳಿಲು ಯುವಕರ ತಂಡ ಸಂಯೋಜಿಸಿದ ನಾದ ವಿಘ್ನೇಶ್ವರ ಭಕ್ತಿಗೀತೆ ಬಿಡುಗಡೆ
ಪಡುಬಿದ್ರಿ : ಇಲ್ಲಿನ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿ ಪಡುಬಿದ್ರಿ ಕಲಾಬೊಳ್ಳಿಲು ಯುವಕರ ತಂಡ ಸಂಯೋಜಿಸಿದ ನಾದ ವಿಘ್ನೇಶ್ವರ ಶ್ರೀ ಕ್ಷೇತ್ರದ ಭಕ್ತಿಗೀತೆಯನ್ನು ಸಾಂಸ್ಕೃತಿಕ ಸಮಿತಿ ಸಂಚಾಲಕರಾದ ಡಾ. ವೈ.ಎನ್.ಶೆಟ್ಟಿ, ಪಿ.ಎಸ್. ನಟರಾಜ ರಾವ್ ಹಾಗೂ ಉದ್ಯಮಿ ಗಣೇಶ್ ಗುಜರಾನ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಸುರೇಶ್,ಪ್ರಕಾಶ್, ಅಶೋಕ್ ಪಾದೆಬೆಟ್ಟು ಬಿಡುಗಡೆಗೊಳಿಸಿದರು.
ತಂಡ ಪ್ರಮುಖರಾದ ಅಕ್ಷಿತ್ ಪೂಜಾರಿ ಉಳ್ಳೂರು, ಲತೇಶ್ ಪಡುಬಿದ್ರಿ, ಶೈಲೇಶ್ ಆಚಾರ್ಯ ಮೈಲೊಟ್ಟು, ಅಭಿಲಾಷ್ ದೇವಾಡಿಗ ಪಡುಬಿದ್ರಿ, ಶ್ರೀರಾಜ್ ಆಚಾರ್ಯ, ವಿಕಾಸ್ ಆಚಾರ್ಯ, ನಿಶ್ಚಿತ್ ಪಾದೆಬೆಟ್ಟು,ಅಂಕಿತ್ ಪಾದೆಬೆಟ್ಟು,ಸೂರಜ್ ಪಾದೆಬೆಟ್ಟು, ರಂಜಿತ್ ಪಾದೆಬೆಟ್ಟು,ರಾಜೇಶ್ ಪಡುಬಿದ್ರಿ ಉಪಸ್ಥಿತರಿದ್ದರು.
