ಕಾಪು : ಗೋ ಮಾತೆ ಗೌರವ ದಿನ - ಅಭಿಯಾನಕ್ಕೆ ಚಾಲನೆ
ಕಾಪು : ದೇಶದಾದ್ಯಂತ ನಡೆಯುತ್ತಿರುವ ಗೋ ಹತ್ಯೆ ನಿಷೇಧ ಹಾಗೂ ಗೋವನ್ನು ರಾಷ್ಟ್ರಮಾತೆಯನ್ನಾಗಿ ಘೋಷಿಸಬೇಕು ಎಂಬ ಹಿನ್ನೆಲೆಯಲ್ಲಿ ಎ.27, ಗೋ ಮಾತೆ ಗೌರವ ದಿನದಂದು ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ ಅವರು ಸುಧೀರ್ ಪೂಜಾರಿ ಸಾಮಿಲ್ ತೋಟ ಪಡು ಕಾಪುವಿನಲ್ಲಿ ಗೋಪೂಜೆ ಸಲ್ಲಿಸಿ ಅಭಿಯಾನಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ವನ್ಯಜೀವಿ ಸಂರಕ್ಷಕರಾದ ಪ್ರಶಾಂತ್ ಪೂಜಾರಿ, ನಮ್ಮ ಕಾಪು ಚಾನೆಲ್ ಪ್ರವರ್ತಕರಾದ ವಿಕ್ಕಿ ಪೂಜಾರಿ ಮಡುಂಬು, ಸತೀಶ್ ದೇವಾಡಿಗ ಹಾಗೂ ಸುಧೀರ್ ಕುಟುಂಬಸ್ಥರು ಉಪಸ್ಥಿತರಿದ್ದರು.
