ಪಡುಬಿದ್ರಿ : ಬಸ್ ಸ್ಟ್ಯಾಂಡ್ನನಲ್ಲಿ ದೊರೆತ ಚಿನ್ನವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ
ಪಡುಬಿದ್ರಿ : ಇಲ್ಲಿನ ಬಸ್ ಸ್ಟ್ಯಾಂಡ್ ನಲ್ಲಿ ದೊರೆತ ರೂ. 50,000 ಮೌಲ್ಯದ ಚಿನ್ನವಿದ್ದ ಬ್ಯಾಗನ್ನು ರಿಕ್ಷಾ ಚಾಲಕ ಮತ್ತು ಮಹಿಳೆಯೋರ್ವರು ಪಡುಬಿದ್ರಿ ಠಾಣೆಗೆ ಒಪ್ಪಿಸಿ ಮಾಲಿಕರಿಗೆ ಹಸ್ತಾಂತರಿಸಿದ್ದಾರೆ.
ರಿಕ್ಷಾ ಚಾಲಕ ಜಗದೀಶ ಮತ್ತು ಆಶಾಲತಾ ರವರು ಬಸ್ ಸ್ಟ್ಯಾಂಡ್ ನಲ್ಲಿ ದೊರೆತ ಬ್ಯಾಗನ್ನು ತಕ್ಷಣ ಪಡುಬಿದ್ರಿ ಠಾಣೆಗೆ ತಂದು ನೀಡಿದ್ದರು.
ತದನಂತರ ಬ್ಯಾಗಿನ ಮಾಲಕಿಯಾದ ಫಾತಿಮಾ ಮಂಗಳೂರು ಇವರಿಗೆ ಠಾಣಾಧಿಕಾರಿ ಸಕ್ತಿವೇಲು ಸಮ್ಮುಖ ಹಸ್ತಾಂತರಿಸಲಾಯಿತು.
