ಅತಿ ಹಿಂದುಳಿದ ಮಠಾಧೀಶರ ಮಹಾಸಭೆಯ ಸ್ವಾಮೀಜಿಗಳನ್ನು ಭೇಟಿಯಾದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ
Thumbnail

ಬೆಂಗಳೂರು‌ : ಅತಿ ಹಿಂದುಳಿದ ಮಠಾಧೀಶರ ಮಹಾಸಭೆಯ ಸ್ವಾಮೀಜಿಗಳನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಭೇಟಿಯಾದರು.

ಚಿತ್ರದುರ್ಗದಲ್ಲಿ ಯಡಿಯೂರಪ್ಪನವರ ಅಭಿಮಾನೋತ್ಸವದಲ್ಲಿ ಅತಿ ಹಿಂದುಳಿದ ಮಠಾಧೀಶರ ನಿರ್ಲಕ್ಷ  ಆಗಿರುವುದನ್ನು ತಿಳಿದು,  ಖುದ್ದು ಸ್ವಾಮೀಜಿಗಳನ್ನು ಭೇಟಿಯಾಗಿ ನಡೆದ ಘಟನೆಯನ್ನು ನೆನಪಿಸಿ ವ್ಯಥೆ ಪಟ್ಟರು. 

ಮುಂದಿನ ದಿನಗಳಲ್ಲಿ  ಈ ರೀತಿಯ ಯಾವುದೇ ಘಟನೆ ಆಗದೆ ಇರುವಂತೆ ನೋಡಿಕೊಳ್ಳುತ್ತೇವೆ ಎಂದು ಪೂಜ್ಯ ಸ್ವಾಮೀಜಿಗಳಿಗೆ ಯಡಿಯೂರಪ್ಪನವರು ತಿಳಿಸಿದರು.

ನಂತರ ಮಹಾಸಭೆಯ ರಾಜ್ಯಾಧ್ಯಕ್ಷರಾದ ಡಾ. ಪ್ರಣವಾನಂದ ಮಹಾಸ್ವಾಮೀಜಿಗಳ ನೇತೃತ್ವದಲ್ಲಿ ಯಡಿಯೂರಪ್ಪನವರನ್ನು‌ ಸನ್ಮಾನಿಸಲಾಯಿತು.

‌ಈ‌‌ ಸಂದರ್ಭ ರಾಜ್ಯ ಮಹಾಸಭೆಯ ಉಪಾಧ್ಯಕ್ಷರಾದ  ಶ್ರೀ ಬಸವಮೂರ್ತಿ ಮಾಧಾರ ಚೆನ್ನಯ್ಯ ಸ್ವಾಮೀಜಿ ಚಿತ್ರದುರ್ಗ ಮತ್ತಿತರರು ಉಪಸ್ಥಿತರಿದ್ದರು.

Additional image
29 May 2026, 10:05 PM
Category: Kaup
Tags: