ಶಿರ್ವ : ಕೃಷ್ಣವೇಣಿ ಆಯುರ್ವೇದ,ಚಿಕಿತ್ಸಾ ಮತ್ತು ಸ್ವಾಸ್ಥ್ಯ ಕೇಂದ್ರ,ಜೇಸಿಐ ಶಂಕರಪುರ ಜಾಸ್ಮಿನ್ ಜಂಟಿ ಆಶ್ರಯದಲ್ಲಿ ಜೂ.7 ರವಿವಾರ ಸಾಲ್ಮರ ಕೃಷ್ಣವೇಣಿ ಆಯುರ್ವೇದ,ಚಿಕಿತ್ಸಾಲಯದಲ್ಲಿ ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1.30ರ ಪರ್ಯಂತ"ಉಚಿತ ಅರೋಗ್ಯ ತಪಾಸಣಾ ಮತ್ತು ಚಿಕಿತ್ಸಾ ಶಿಬಿರ" ಜರುಗಲಿದೆ.
ಹಿರಿಯ ಮೂಳೆ ತಜ್ಞ ಡಾ.ಪ್ರಕಾಶ್ ಭಟ್ ಮರ್ಣೆ ಆರ್ಥೋಪೆಡಿಕ್ ಕ್ಲಿನಿಕ್ ಉಡುಪಿ ಇವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಹಿರಿಯ ಆಯುರ್ವೇದ ಸರ್ಜನ್ ಡಾ.ಸುಕೇಶ್ ಎ. ಮೂಡಬಿದ್ರೆ ಭಾಗವಹಿಸುವರು.
ಅಧ್ಯಕ್ಷತೆಯನ್ನು ಸಾಲ್ಮರ ಗೋವಿಂದ ಭಟ್ ಫ್ಯಾಮಿಲಿ ಟ್ರಸ್ಟ್ ಶಂಕರಪುರ ಇದರ ಟ್ರಸ್ಟಿ ಹರಿದಾಸ್ ಭಟ್ ವಹಿಸುವರು.
ಜೇಸಿಐ ಅಧ್ಯಕ್ಷ ರಾಜೇಶ್ ಆಚಾರ್ಯ, ಕಾರ್ಯದರ್ಶಿ ಭವ್ಯ ಸುವರ್ಣ, ಬಂಟಕಲ್ಲು ಗಾಯತ್ರಿ ವೃಂದದ ಅಧ್ಯಕ್ಷೆ ವಿದ್ಯಾ ಹರೀಶ್, ಕೃಷ್ಣವೇಣಿ ಆಯುರ್ವೇದ ಮತ್ತು ಆಶ್ರಯಧಾಮದ ಮುಖ್ಯ ವೈದ್ಯಾಧಿಕಾರಿ ಡಾ.ಕೆ.ಲಕ್ಷ್ಮೀಶ ಉಪಾಧ್ಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ರಮೇಶ್ ಮಿತ್ತಾಂತಾಯ ಉಪಸ್ಥಿತರಿರುವರು.
ಶಿಬಿರದಲ್ಲಿ ನುರಿತ ವೈದ್ಯರುಗಳಿಂದ ಮಂಡಿನೋವು, ಸೊಂಟನೋವು, ನರದೌರ್ಬಲ್ಯ, ಶೀತ, ಕೆಮ್ಮು, ಉಬ್ಬಸ ಸಹಿತ ವಿವಿಧ ಕಾಯಿಲೆಗಳ ತಪಾಸಣೆ, ಹಾಗೂ ಔಷಧಿ ನೀಡಲಾಗುವುದು, ರಕ್ತಹೀನತೆ, ಡಯಾಬಿಟಿಸ್ ರೋಗಕ್ಕೆ ಉಚಿತ ಚಿಕಿತ್ಸೆ, ರಕ್ತತಪಾಸಣೆ ಮಾಡಲಾಗುವುದು ಎಂದು ಸಂಘಟಕರ ಪ್ರಕಟನೆ ತಿಳಿಸಿದೆ.
