ಪಡುಬಿದ್ರಿ : ಕಲಾವಿದ ರಮೇಶ ಬಂಟಕಲ್ಲುರವರಿಂದ ಕಲೆಯ ಮೂಲಕ ಸಂವಹನ ಕಾರ್ಯಕ್ರಮ
Thumbnail

ಪಡುಬಿದ್ರಿ : ಭಾರತೀಯ ಭಾಷಾ ಉತ್ಸವದ ಅಂಗವಾಗಿ ಪಡುಬಿದ್ರಿ ಗಣಪತಿ ಪ್ರೌಢಶಾಲೆಯಲ್ಲಿ ಕಲೆಯ ಮೂಲಕ ಸಂವಹನ ಎಂಬ ವಿಶಿಷ್ಟ ಕಾರ್ಯಕ್ರಮವು ನಡೆಯಿತು. 

ಹಿರಿಯ ಕಲಾವಿದ ರಮೇಶ ಬಂಟಕಲ್ಲು ಇವರು ವಿವಿಧ ಕಲಾಪ್ರಕಾರಗಳ ಮೂಲಕ ಹೇಗೆ ಸಂವಹನ ಕೌಶಲವನ್ನು ಪರಿಣಾಮಕಾರಿಯಾಗಿಸಬಹುದು ಎಂಬುದರ ಕುರಿತು ವಿಶೇಷ ಕಾರ್ಯಶಾಲೆಯನ್ನು ನಡೆಸಿಕೊಟ್ಟರು. 

ವಿದ್ಯಾರ್ಥಿಗಳು ಅವರ ಮಾರ್ಗದರ್ಶನದಲ್ಲಿ ತಾವೇ ಸ್ವತಃ ಕಲಾಕೃತಿಗಳನ್ನು ರಚಿಸಿ ಸಂಭ್ರಮಿಸಿದರು.  ರಮೇಶ ಬಂಟಕಲ್ಲು ಇವರನ್ನು ಸಂಸ್ಥೆಯ ವತಿಯಿಂದ ಗೌರವಿಸಲಾಯಿತು.

ಈ ಸಂದರ್ಭ ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕ ವೃಂದದವರು, ಸಿಬಂದಿ ವರ್ಗ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Additional image
17 Jul 2026, 10:24 AM
Category: Kaup
Tags: