ಹೊಂಡ ಗುಂಡಿಗಳ ಇನ್ನಂಜೆ ಶಂಕರಪುರ ರಸ್ತೆ : ಸಂಚಾರಕ್ಕೆ ಸಂಕಷ್ಟಪಡುತ್ತಿರುವ ವಾಹನ ಸವಾರರು
ಕಾಪು : ಉಡುಪಿ ಜಿಲ್ಲೆಯಲ್ಲಿ ಹಾಳಾಗಿರುವ ಬಹಳಷ್ಟು ರಸ್ತೆಗಳಿಂದಾಗಿ ಸಾರ್ವಜನಿಕರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಅದರಲ್ಲೂ ಇನ್ನಂಜೆ ಶಂಕರಪುರ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಆಗಿರುವ ಬೃಹತ್ ಹೊಂಡ ಗುಂಡಿಗಳಿಂದಾಗಿ ವಾಹನ ಸವಾರರು ದಿನನಿತ್ಯ ಹರಸಾಹಸಪಡುತ್ತಿದ್ದು, ಸಾವಿನ ದವಡೆಯಲ್ಲಿ ಪ್ರಯಾಣಿಸುವಂತಾಗಿದೆ.
ಸರಿಸುಮಾರು 15ವರ್ಷಗಳ ಹಿಂದಿನ ಕಾಮಗಾರಿ ಇದಾಗಿದ್ದು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಾರ್ವಜನಿಕರು ತೊಂದರೆಪಡುವಂತಾಗಿದೆ, ಈ ಭಾಗಕ್ಕೆ ಹೊಸ ರಸ್ತೆಯ ಅಗತ್ಯವಿದ್ದು, ಜನಪ್ರತಿನಿದಿಗಳು, ಅಧಿಕಾರಿ ವರ್ಗ ಇತ್ತ ಗಮನಹರಿಸಬೇಕೆಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
