ಪಡುಕುತ್ಯಾರು : ಆಷಾಢ ಮಾಸದ ಆಚರಣೆ
Thumbnail

ಕಾಪು : ಶ್ರೀ ದುರ್ಗಾ ಮಹಿಳಾ ಮಂಡಳಿ, ಪಡುಕುತ್ಯಾರು ಮತ್ತು ಶ್ರೀ ವಿಶ್ವಕರ್ಮ ಸಮಾಜ ಸೇವಾ ಸಂಘದ ವತಿಯಿಂದ ಆಷಾಢ ಮಾಸದ ಆಚರಣೆಯನ್ನು ಶ್ರೀ ದುರ್ಗಾದೇವಿ ಮಂದಿರದಲ್ಲಿ ಆಚರಿಸಲಾಯಿತು.

ಪ್ರಥಮವಾಗಿ ಆಷಾಡ ಮಾಸದ ಆಚರಣೆಯ ಕಾರ್ಯಕ್ರಮವನ್ನು ಮಹಿಳಾ ಮಂಡಳಿಯ ಅಧ್ಯಕ್ಷರಾದ ದೀಕ್ಷಾ ಜಿತೇಶ್ ಆಚಾರ್ಯ,  ವಿಶ್ವಕರ್ಮ ಸಮಾಜ ಸೇವಾಸಂಘದ ಅಧ್ಯಕ್ಷರಾದ  ಸದಾಶಿವ ಎ ಆಚಾರ್ಯ, ಕೂಡುವಳಿಕೆಯ ಮೋಕ್ತೇಶರ್ರಾದ ಪ್ರವೀಣ್ ಆಚಾರ್ಯ,  ಕಾರ್ಯಧ್ಯಕ್ಷರಾದ ಜಯರಾಮ ಆಚಾರ್ಯ, ಗೌರವ ಸಲಹೆಗಾರರಾದ ಹರಿಶ್ಚಂದ್ರ ಆಚಾರ್ಯ ಮತ್ತು ಮಹಿಳಾ ಮಂಡಳಿಯ ಪದಾಧಿಕಾರಿಗಳು ಸೇರಿ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಅಧ್ಯಕ್ಷೀಯ ಭಾಷಣದಲ್ಲಿ ದೀಕ್ಷಾ ಜಿತೇಶ್ ಆಚಾರ್ಯ ಮಾತನಾಡಿ, ತುಳುನಾಡಿನ ಸಂಸ್ಕೃತಿಯಂತೆ  ವಿವಿಧ  ಆಹಾರ ಖಾದ್ಯಗಳಲ್ಲಿ ಔಷಧೀಯ ಗುಣಗಳು ಹೊಂದಿರುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದು. ಮಕ್ಕಳು ಈ ವಿಚಾರವನ್ನು ತಿಳಿದುಕೊಂಡು ಆಹಾರ ಪದ್ಧತಿಯನ್ನು ಮುಂದುವರಿಸಿಕೊಂಡು ಹೋದರೆ ಆರೋಗ್ಯ ಸಮಸ್ಯೆ ಬರುವುದಿಲ್ಲವೆಂದರು.

ಸಭೆಯಲ್ಲಿ ಮಹಿಳಾ ಮಂಡಳಿಯ ಪದಾಧಿಕಾರಿಗಳು, ಸಂಘದ ಪದಾಧಿಕಾರಿಗಳು, ಕೂಡುವಳಿಕೆಯ ಸದಸ್ಯರು,  ಮಹಿಳೆಯರು, ಯುವಕರು, ಮಕ್ಕಳು ಭಾಗವಹಿಸಿದ್ದರು.

ಸುಮಾರು 22 ಬಗೆಯ ವಿವಿಧ ಖಾದ್ಯಗಳನ್ನು  ಉಣ ಬಡಿಸಿದರು.

ವೇದಿಕೆಯಲ್ಲಿ ಹಿರಿಯರಾದ ಹರಿಶ್ಚಂದ್ರ ಆಚಾರ್ಯ, ಪ್ರವೀಣ್ ಆಚಾರ್ಯ, ಜಯರಾಮ ಆಚಾರ್ಯ ಕಾಪು , ಮಹಿಳಾ ಮಂಡಳಿಯ ಪದಾಧಿಕಾರಿಗಳಾದ ಶಾಲಿನಿ ರತ್ನಾಕರ ಆಚಾರ್ಯ,  ಹೇಮಾವತಿ ಪ್ರಕಾಶ್ ಆಚಾರ್ಯ, ಜಯಶ್ರೀ ಪ್ರವೀಣ್ ಆಚಾರ್ಯ ಉಪಸ್ಥಿತರಿದ್ದರು.

ಸೌಮ್ಯ ದಿನೇಶ್ ಆಚಾರ್ಯ ಪ್ರಸ್ತಾವನೆಗೈದರು. ಸಂಘದ ಅಧ್ಯಕ್ಷರಾದ ಸದಾಶಿವ ಎ ಆಚಾರ್ಯರವರು  ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯಕ್ರಮವನ್ನು ಸೌಮ್ಯ ದಿನೇಶ್ ಆಚಾರ್ಯ ನಿರೂಪಿಸಿ, ಶಾಲಿನಿ  ರತ್ನಾಕರ ಆಚಾರ್ಯರವರು ವಂದಿಸಿದರು. 

27 Jul 2026, 09:33 PM
Category: Kaup
Tags: