ಕಾಪು : ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆ ಪಡುಬೆಳ್ಳೆಯಲ್ಲಿ ಇಬ್ಬರು ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭ ಆಯೋಜಿಸಲಾಯಿತು.
ಮುಖ್ಯ ಶಿಕ್ಷಕಿ ಉಷಾ ಎಸ್ ಮತ್ತು ಸಹ ಶಿಕ್ಷಕಿ
ಅರುಂಧತಿ ಪ್ರಭು ಇವರನ್ನು ಚಿನ್ನದ ನಾಣ್ಯ, ಉಡುಗೊರೆಗಳೊಂದಿಗೆ ಹಳೇ ವಿದ್ಯಾರ್ಥಿಗಳು ಸನ್ಮಾನಿಸಿದರು.
ಹರೀಶ್ ಶೆಟ್ಟಿ ಸೂಡ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಸಭಾಧ್ಯಕ್ಷತೆಯನ್ನು ಮುಂಬೈ ಬಿಲ್ಲವ ಅಸೋಸಿಯೇಷನ್ ಇದರ ಶಕುಂತಲಾ ಸುವರ್ಣ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಹಳೆ ವಿದ್ಯಾರ್ಥಿಗಳಾದ ಸಂತೋಷ್ ಸುವರ್ಣ, ಪ್ರಸಾದ್, ಸ್ಟೀಫನ್, ದಿನೇಶ್, ಸಂತೋಷ್, ಕೇದಾರನಾಥ, ವಿನುತ, ವಿಶಾಲಾಕ್ಷಿ, ರಿಚರ್ಡ್, ಶಾಲಾ ನಿವೃತ್ತ ಶಿಕ್ಷಕರು, ಶಾಲಾ ನಿರ್ವಾಹಕರು, ಶಿವಾಜಿ ಸುವರ್ಣ, ಶಿಕ್ಷಕರು ವಿದ್ಯಾರ್ಥಿಗಳು, ಸನ್ಮಾನಿತರ ಕುಟುಂಬಸ್ಥರು ಉಪಸ್ಥಿತರಿದ್ದರು.
ನಿತ್ಯಾನಂದ ಆಚಾರ್ಯ ಸ್ವಾಗತಿಸಿದರು.
ಪಾಂಡುರಂಗ ಮಲ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಶುಭಲಕ್ಷ್ಮಿ ಹಾಗೂ ಅಕ್ಷತಾ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಮಂಜುನಾಥ್ ಪಾಟ್ಕರ್ ಹಾಗೂ ರಿಚರ್ಡ್ ಧಾಂತಿ ಶುಭಾಶಂಸನೆಗೈದರು. ಸುರೇಶ್ ನಾಯಕ್, ಹಾಗೂ ಗಣೇಶ್ ತಂತ್ರಿ ಕಾರ್ಯಕ್ರಮ ನಿರೂಪಿಸಿದರು. ವಿಜಯ್ ಧೀರಜ್ ವಂದಿಸಿದರು.
