ಉಡುಪಿ : 75ನೇ ಸ್ವಾತಂತ್ರ್ಯ ಸುವರ್ಣ ಮಹೋತ್ಸವದ ಅಂಗವಾಗಿ ಘನವೆತ್ತ ಭಾರತ ಸರಕಾರದಿಂದ ದೇಶದಾದ್ಯಂತ 750 ಜನ ಔಷಧಿ ಕೇಂದ್ರಗಳಲ್ಲಿ ಹಿರಿಯ ನಾಗರಿಕರಿಗೆ 100 ಔಷಧೀಯ ಕಿಟ್ ಗಳನ್ನು ಪ್ರತಿಯೊಂದು ಜನ ಔಷಧಿ ಕೇಂದ್ರಗಳಿಗೆ ಹಂಚಲು ನೀಡಲಿದ್ದು, ಇದೆ ತಿಂಗಳ 10ನೇ ತಾರೀಖಿನಂದು ಹಂಚಲಿದ್ದು ಬ್ರಹ್ಮಾವರ ಜನ ಔಷಧಿ ಕೇಂದ್ರಕ್ಕೂ ನೀಡಿದ್ದು , ಅದರ ಜೊತೆ ಸೈಬ್ರಕಟ್ಟೆ ರೋಟರಿ ವತಿಯಿಂದ ಅಣ್ಣಯ್ಯದಾಸ್ ಅವರ ಕೊಡುಗೆ ಸುಮಾರು 7500ರೂ. ಮೌಲ್ಯದ 30 ಔಷಧೀಯ(ವಿಟಮಿನ್ ಪೌಡರ್, ಟಾನಿಕ್, ಜ್ಯೂಸ್) ಕಿಟ್ ಗಳನ್ನು ಜನ ಔಷಧಿ ಕೇಂದ್ರದ ಆಡಳಿತ ಪಾಲುದಾರಾರದ ಸುಂದರ್ ಅವರಿಗೆ ಹಿರಿಯ ನಾಗರಿಕರಿಗೆ ವಿತರಿಸಲು, ವಲಯ ಸಹಾಯಕ ಗವರ್ನರ್ ಪದ್ಮನಾಭ ಕಾಂಚನ್ ಮೂಲಕ ಹಸ್ತಾಂತರಿಸಲಾಯಿತು.
ಈ ಸಂದರ್ಭ ರೋಟರಿ ಅಧ್ಯಕ್ಷರಾದ ಪ್ರಸಾದ್ ಭಟ್, ವಲಯ ಸೇನಾನಿ ವಿಜಯಕುಮಾರ್ ಶೆಟ್ಟಿ , ಕಿರಣ್ ಕಾಜ್ರಲ್ಲಿ , ನೀಲಕಂಠ ರಾವ್, ಗಣೇಶ್ ನಾಯಕ್, ರಾಮ ಪ್ರಕಾಶ್ ಉಪಸ್ಥಿತರಿದ್ದರು.