ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಇನ್ನಂಜೆ ಯುವಕ ಮಂಡಲದ ಸುವರ್ಣ ಮಹೋತ್ಸವದ ಸವಿ ನೆನಪಿಗಾಗಿ ಸ್ವಂತ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ

Posted On: 09-10-2021 04:51PM

ಕಾಪು : ಇನ್ನಂಜೆ ಯುವಕ ಮಂಡಲ (ರಿ.) ಇನ್ನಂಜೆ ಇದರ ಸುವರ್ಣ ಮಹೋತ್ಸವದ ಸವಿ ನೆನಪಿಗಾಗಿ ಇನ್ನಂಜೆ ಶಾಲಾ ದಾಸಭವನದ ಸಮೀಪ ಇನ್ನಂಜೆ ಯುವಕ ಮಂಡಲದ ಸ್ವಂತ ಕಟ್ಟಡದ ಶಿಲಾನ್ಯಾಸವು ಬಾಲವನದ ವಠಾರದಲ್ಲಿ ಶ್ರೀ ಶ್ರೀ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿಯವರ ದಿವ್ಯಹಸ್ತದಲ್ಲಿ ನೆರವೇರಿತು.

ಶ್ರೀಗಳು ಶಿಲಾಫಲಕವನ್ನು ಅನಾವರಣಗೊಳಿಸಿ 50 ವರ್ಷಕ್ಕೂ ಹೆಚ್ಚಿನ ಇತಿಹಾಸ ಹೊಂದಿರುವ ಇನ್ನಂಜೆ ಯುವಕ ಮಂಡಲದ ಯುವಕರ ಉಂಡಾರು ದೇವಳದ ಜೀರ್ಣೋದ್ಧಾರ ಸಂದರ್ಭದಲ್ಲಿನ ಕರ ಸೇವೆಯನ್ನು ಸ್ಮರಿಸಿದರು. ಇವರ ಕಟ್ಟಡದ ಕನಸು ಒಂದು ವರ್ಷದ ಒಳಗಾಗಿ ನೆರವೇರಲಿ ಎಂದು ಆರ್ಶಿವಚನ ನೀಡಿದರು.

ವೇದಿಕೆಯಲ್ಲಿ ಮುಖ್ಶ ಅಥಿತಿಯಾಗಿ ಎಸ್.ವಿ.ಎಸ್ ವಿದ್ಯಾಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರತ್ನಕುಮಾರ್, ಯುವಕ ಮಂಡಲದ ಗೌರವ ಸಲಹೆಗಾರರಾದ ನವೀನ್ ಅಮೀನ್, ಸಲಹಾ ಸಮಿತಿಯ ಸದಸ್ಯರುಗಳಾದ ರವಿವರ್ಮ ಶೆಟ್ಟಿ ˌ ನಂದನ್ ಕುಮಾರ್ ಮತ್ತು ಸುರೇಶ್ ಎನ್ ಪೂಜಾರಿಯವರು ಭಾಗವಹಿಸಿದ್ದರು.

ಅಧ್ಯಕ್ಷತೆಯನ್ನು ಇನ್ನಂಜೆ ಯುವಕ ಮಂಡಲದ ಅಧ್ಯಕ್ಷರಾದ ಉಮೇಶ್ ಆಚಾರ್ಯ ವಹಿಸಿದ್ದರು. ಶಿಲಾನ್ಯಾಸ ಧಾರ್ಮಿಕ ವಿಧಿವಿಧಾನ ವನ್ನು ಉಂಡಾರು ದೇವಳದ ಅರ್ಚಕರಾದ ವಿಷ್ಣುಮೂರ್ತಿ ಮಂಜಿತ್ತಾಯರವರು ನೆರವೇರಿಸಿದರು. ಎಸ್.ವಿ.ಎಚ್ ಕಾಲೇಜು ಪ್ರಾಂಶುಪಾಲರಾದ ಪುಂಡರಿಕಾಕ್ಷ ಕೊಡಂಚರವರು ಹಾಗೂ ಎಸ್ .ವಿ. ಎಸ್ ಹೈಸ್ಕೂಲು ಮುಖ್ಯೋಪಾಧ್ಯಾಯರಾದ ನಟರಾಜ ಉಪಾಧ್ಯಾಯ ಮತ್ತು ಎಸ್.ವಿ.ಎಸ್ ಇಂಗ್ಲಿಷ್ ಮೀಡಿಯಂ ಶಾಲೆಯ ಮುಖ್ಯೋಪಾಧ್ಯಾಯರಾದ ಕೀರ್ತಿ ಪೈ ರವರು ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷರಾದ ಮದುಸೂಧನ್ ಆಚಾರ್ಯ ಪ್ರಾಸ್ತಾವಿಕ ಮಾತನಾಡಿ, ನಿವೃತ್ತ ಅಧ್ಯಾಪಕರಾದ ನಂದನ್ ಕುಮಾರ್ ರವರು ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಹರಿಶ್ ಪೂಜಾರಿಯವರು ವಂದಿಸಿದರು. ಸ್ಥಳೀಯ ಸಂಘ ಸಂಸ್ಧೆಯ ಅಧ್ಶಕ್ಷರುಗಳುˌ ಯುವಕ ಮಂಡಲದ ಮಾಜಿ ಅಧ್ಶಕ್ಷರುಗಳು, ಸದಸ್ಯರುಗಳು, ಸ್ಥಳೀಯರು ಉಪಸ್ಥಿತರಿದ್ದರು.