ಕಾಪು : ನಂದಿಕೂರು ಸಮೀಪದ ಇನ್ನಾದಲ್ಲಿ ಇರುವ ಬ್ರೈಟ್ ಕಂಪನಿಯ ಘನ ತ್ಯಾಜ್ಯವನ್ನು ಬೆಳಪುವಿನ ರಝಕ್ ಎಂಬ ವ್ಯಕ್ತಿ ಎಲ್ಲೂರು ವ್ಯಾಪ್ತಿಯಲ್ಲಿ ವಾಹನದ ಮೂಲಕ ತಂದು ಎಸೆದಿರುವುದನ್ನು ಸಾಕ್ಷಿ ಸಮೇತ ಎಲ್ಲೂರು ಪಂಚಾಯತ್ ಅಧ್ಯಕ್ಷರು ಪತ್ತೆ ಹಚ್ಚಿದ್ದಾರೆ.
ಈ ಸಂದರ್ಭ ಪಂಚಾಯತ್ ಅಧ್ಯಕ್ಷರು ಕಸ ಕೊಟ್ಟ ಕಂಪನಿಯವರನ್ನು ಮತ್ತು ಕಸ ಹಾಕಿದ ರಝಕ್ ರನ್ನು ಸ್ಥಳಕ್ಕೆ ಕರೆಯಿಸಿ ತ್ಯಾಜ್ಯ ಹಾಕಿದ ರಝಕ್ ಇವರಿಗೆ 5000 ರೂ. ದಂಡ ವಿಧಿಸಿದ್ದಾರೆ.