ವಿಹಿಂಪ, ಭಜರಂಗದಳ : ಪ್ರತಿಭಟನೆ
Posted On:
21-10-2021 01:22PM
ಉಡುಪಿ: ಯಾವೆಲ್ಲಾ ದೇಶದಲ್ಲಿ ಇಸ್ಲಾಂ ಇದೆಯೋ ಅಲ್ಲೆಲ್ಲಾ ಅಶಾಂತಿ ನೆಲೆಸಿದೆ. ಇಸ್ಲಾಂ ಇರುವಲ್ಲಿ ಭಯೋತ್ಪಾದಕತೆ ಇದೆ ಎಂದು ಭಜರಂಗದಳ ರಾಜ್ಯ ಸಂಚಾಲಕ ಸುನೀಲ್ ಕೆ.ಆರ್ ಹೇಳಿದರು.
ಬುಧವಾರ ಉಡುಪಿಯ ಅಜ್ಜರಕಾಡು ಹುತಾತ್ಮ ಸ್ಮಾರಕದಲ್ಲಿ ನಡೆದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು, ಬಾಂಗ್ಲಾದೇಶದಲ್ಲಿ ಹಿಂದು ದೇವಾಲಯಗಳ ಮೇಲೆ ನಿರಂತರ ದಾಳಿ ನಡೆಯುತ್ತಿದೆ. ಭಾರತದಲ್ಲಿಯೂ ಹಿಂದುಗಳು ಅಲ್ಪಸಂಖ್ಯಾತ ಇರುವಲ್ಲಿ ಇಸ್ಲಾಂ ಜಿಹಾದಿಗಳು ದೌರ್ಜನ್ಯ ನಡೆಸುತ್ತಿದ್ದಾರೆ.
ಭಾರತದ ಹಿಂದುಗಳು ಸಂಘಟಿತರಾಗಬೇಕು, ಇವತ್ತು ಬಾಂಗ್ಲದೇಶಕ್ಕೆ ಬಂದ ಸ್ಥಿತಿ ನಾಳೆ ನಮಗೂ ಬರಬಹುದೆಂದು ಆತಂಕ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಿಹಿಂಪ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್, ವಿಹಿಂಪ ಮುಖಂಡ ಅಶೋಕ್ ಮೊದಲಾದವರು ಉಪಸ್ಥಿತರಿದ್ದರು.