ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಲ್ಯಾಣಪುರ ರೋಟರಿ ಕ್ಲಬ್ಬಿನಿಂದ ವಿವಿಧ ಸಾಮಾಜಿಕ ಚಟುವಟಿಕೆಗಳು

Posted On: 22-10-2021 07:19PM

ಉಡುಪಿ : ರೋಟರಿ ಜಿಲ್ಲೆ 3182 ಇದರ ಗವರ್ನರ್ ರಾಮಚಂದ್ರ ಮೂರ್ತಿ ಹಾಗೂ ರೋಟರಿ ಜಿಲ್ಲಾ ಪ್ರಥಮ ಮಹಿಳೆ ಸುರೇಖಾ ಪ್ರಪ್ರಥಮ ಬಾರಿಗೆ ಕಲ್ಯಾಣಪುರ ರೋಟರಿ ಕ್ಲಬ್ಬಿಗೆ ಅಧಿಕೃತವಾಗಿ ಭೇಟಿ ನೀಡಿದರು.

ಅಸಿಸ್ಟೆಂಟ್ ಗವರ್ನರ್, ಪದ್ಮನಾಭ ಕಾಂಚನ್ , ಅಧ್ಯಕ್ಷ ಶಂಭು ಶಂಕರ್, ಪೂರ್ಣಿಮಾ, ಕಾರ್ಯದರ್ಶಿ ಪ್ರಕಾಶ್, ಜಿಲ್ಲಾ ನಿಕಟಪೂರ್ವ ಗವರ್ನರ್ ರಾಜಾರಾಮ್ ಭಟ್, ನಿಕಟಪೂರ್ವ ಜಿಲ್ಲಾಕಾರ್ಯದರ್ಶಿ ಅಲೆನ್ ಲುಯಿಸ್, ವಲಯ ಸೇನಾನಿ ಬ್ರ್ಯಾನ್ ಡಿಸೋಜ ಹಾಗೂ ಸದಸ್ಯರು ಬರಮಾಡಿಕೊಂಡರು.

ಸಂತೆಕಟ್ಟೆ ಗೊರೆಟ್ಟಿ ಆಸ್ಪತ್ರೆಗೆ ಭೇಟಿ ನೀಡಿ ಕಲ್ಯಾಣಪುರ ರೋಟರಿ ಕ್ಲಬ್ಬಿನಿಂದ ನೀಡಲಾದ ಡಯಾಲಿಸಿಸ್ ಸೆಂಟರ್ ಗೆ ಭೇಟಿ ಪರಿಶೀಲಿಸಿ ವೈದ್ಯರು ಮತ್ತು ಸಿಬ್ಬಂದಿಗಳೊಂದಿಗೆ ಸಮಾಲೋಚನೆ ನಡೆಸಿದರು. ಹಾಗೂ ನಾಮ ಫಲಕವನ್ನು ಅನಾವರಣಗೊಳಿಸಿದರು.

ನಂತರ ಮೌಂಟ್ ರೋಸಾರಿ ಹೈಸ್ಕೂಲ್ ಸಂತೆಕಟ್ಟೆ ಶಾಲೆಗೆ ಭೇಟಿ ನೀಡಿ ಸುಮಾರು ರೂ. 18,000 ಮೌಲ್ಯದ ಇನ್ಸಿನರೇಟರನ್ನು ಪ್ರಥಮ ಮಹಿಳೆ ಸುರೇಖ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕೊಡುಗೆ ನೀಡಿದ ಬ್ಯಾಪ್ಟಿಸ್ಟ್ ಡಯಾಸ್ , ಶಾಲಾ ಮುಖ್ಯೋಪಾಧ್ಯಾಯರು ಮತ್ತು ಮಕ್ಕಳು ಉಪಸ್ಥಿತರಿದ್ದರು.