ಕಾರ್ಕಳ : ವಿದ್ಯಾರ್ಥಿಗಳ ಹಲವು ಶೈಕ್ಷಣಿಕ ಸಮಸ್ಯೆಗಳಾದ ವಸತಿನಿಲಯ, ವಿದ್ಯಾರ್ಥಿ ವೇತನ, ಸರಿಯಾದ ಸಾರಿಗೆ ವ್ಯವಸ್ಥೆ ಕಲ್ಪಿಸಿ ಆದಷ್ಟು ಶೀಘ್ರದಲ್ಲಿ ಪರಿಹರಿಸಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಕಳ ತಾಲೂಕಿನಿಂದ ತಹಶಿಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯ, ತಾಲೂಕು ಸಂಚಾಲಕ ಯುಕೇಶ್ ಉಜಿರೆ, ನಗರ ಸಹಕಾರ್ಯದರ್ಶಿ ಶಿವರುದ್ರ ಪಾಟೀಲ್, ಹಾಗೂ ಕಾಲೇಜು ಘಟಕ ಕಾರ್ಯದರ್ಶಿ ಸುಮಂತ್ ಪೂಜಾರಿ, ನಗರ ವಿದ್ಯಾರ್ಥಿನಿ ಸಹ ಪ್ರಮುಖ್ ಕಾಂತಿಶ್ರೀ ಹಾಗೂ ಪ್ರಮುಖ ಕಾರ್ಯಕರ್ತರಾದ ಗೌತಮ್ ಪೂಜಾರಿ, ಸುಶಾನ್, ಸನತ್ ಉಪಸ್ಥಿತರಿದ್ದರು.