ಸಾವಯವ, ಪರಿಸರಸ್ನೇಹಿ ಉತ್ಪನ್ನಗಳಿಗೆ ಮಾರುಕಟ್ಟೆ, ರೈತ ಸಬಲೀಕರಣ, ಉದ್ಯೋಗ ಸೃಷ್ಟಿ, ತ್ಯಾಜ್ಯದಿಂದ ಜೈವಿಕ ಇಂಧನ ಕ್ರಾಂತಿ : ಎಮ್ ಸಿ ಎಲ್ ಸಂಸ್ಥೆಯ ಗುರಿ
Posted On:
29-10-2021 09:19PM
ಕಾಪು : ಮೀರಾಕ್ಲೀನ್ ಫ್ಯುಯೆಲ್ ಲಿಮಿಟೆಡ್ ಸಂಸ್ಥೆಯು ದೇಶದ ಪ್ರತಿ ತಾಲೂಕಿನಲ್ಲಿ ನವೀಕರಿಸಬಹುದಾದ ಸಾವಯವ ಇಂಧನ ತಯಾರಿಕಾ ಘಟಕಗಳ ಸ್ಥಾಪನೆಗೆ ಒತ್ತು ನೀಡಿ ಖನಿಜ ಇಂಧನಕ್ಕೆ ಪರ್ಯಾಯ ವ್ಯವಸ್ಥೆಯಾಗಿ ಜೈವಿಕ ಇಂಧನದ ತಯಾರಿಯೊಂದಿಗೆ, ಆಹಾರೇತರ ಸಾಮಗ್ರಿಗಳಿಂದ ಇಂಧನ, ಗೊಬ್ಬರ ತಯಾರಿ ನಮ್ಮ ಸುತ್ತಮುತ್ತಲಿರುವ ಮನೆ ತ್ಯಾಜ್ಯಗಳನ್ನು ಇಂಧನ ಘಟಕದಲ್ಲಿ ಕಚ್ಚಾ ವಸ್ತುವಾಗಿ ಉಪಯೋಗಿಸಿ ಜನರಿಗೆ ಆದಾಯವನ್ನು ಕೊಡುವ ಸಂಪನ್ಮೂಲವಾಗಿ ಸುವುದು ನಮ್ಮ ಉದ್ದೇಶ ಎಂದು ಎಮ್ ಸಿ ಎಲ್ ಸಂಸ್ಥೆಯ ಅಧಿಕಾರಿ ವಸಂತ ಪೂಜಾರಿ ತಿಳಿಸಿದರು.
ಅವರು ಕಾಪು ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಕಾಪು ತಾಲೂಕಿನ ಘಟಕದಲ್ಲಿ ಸುಮಾರು 12,000 ಉದ್ಯೋಗ ಸೃಷ್ಟಿಸುವುದು, ಆಸಕ್ತ ಜನತೆಗೆ ನಾಟಿ ಕೋಳಿ ಸಾಕಣೆ, ದೇಶಿಹಸು ಸಾಕಣೆ, ಮೀನುಗಾರಿಕೆ, ಜೇನುಸಾಕಣೆ ಇತ್ಯಾದಿ ಉದ್ಯಮಗಳಿಗೆ ಪ್ರೋತ್ಸಾಹ ತರಬೇತಿ ನೀಡಲಾಗುವುದು. ಎಲ್ಲಾ ಸಾವಯವ ಹಾಗೂ ಪರಿಸರ ಸ್ನೇಹಿ ಉತ್ಪನ್ನಗಳಿಗೆ ಮಾರುಕಟ್ಟೆ ಜವಾಬ್ದಾರಿ ಸಂಪೂರ್ಣವಾಗಿ ಎಂಸಿಎಲ್ ಸಂಸ್ಥೆಯಾಗಿರುತ್ತದೆ. ತಾಲೂಕಿನ ಪ್ರತಿಯೊಬ್ಬರಿಗೂ ಈ ಸಂಸ್ಥೆಯಲ್ಲಿ ಸದಸ್ಯತನವನ್ನು ಕಲ್ಪಿಸಿ ಪಾಲುದಾರರಾಗಲು ಅವಕಾಶವನ್ನು ಒದಗಿಸಲಾಗುವುದು.
ಗ್ರಾಮಾಂತರ ಪ್ರದೇಶಗಳ ಮೂಲಭೂತ ಅವಶ್ಯಕತೆಗಳಾದ ನೀರಾವರಿ, ರಸ್ತೆ, ವಿದ್ಯುಚ್ಛಕ್ತಿ ಸಂಪರ್ಕಗಳನ್ನು ಅಭಿವೃದ್ಧಿ, ಬಡಮಕ್ಕಳ ಹಾಗೂ ಕ್ರೀಡಾಪಟುಗಳಿಗೆ ಸಹಾಯ, ತರಬೇತಿ. 2030ರ ವೇಳೆಗೆ ಭಾರತವನ್ನು ಅಭಿವೃದ್ಧಿಶೀಲ ರಾಷ್ಟ್ರವನ್ನಾ ಗಿಸುವುದು ನಮ್ಮ ಗುರಿಯಾಗಿದೆ ಎಂದರು.
ಈ ಸಂದರ್ಭ ಲಿಂಗಪ್ಪ ಪೂಜಾರಿ, ಶ್ರೀಧರ ಆಚಾರ್ಯ, ರಮಾಕಾಂತ ರಾವ್, ಸುರೇಂದ್ರ ಶೆಟ್ಟಿ, ಚೇತನ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.