ಕಾಪು : ಮೂಳೆಗಳ ತೀವ್ರ ದುರ್ಬಲತೆಯ ರೋಗದಿಂದ ಬಳಲುತ್ತಿದ್ದರೂ ತನ್ನ ಹವ್ಯಾಸವಾದ ಚಿತ್ರಕಲೆಯಲ್ಲಿ ತಾನು ಸಾಧಿಸಬೇಕೆಂಬ ಅಚಲ ವಿಶ್ವಾಸದ ಮೂಲಕ ಸಾಧಿಸಿ ತೋರಿಸಿದ ವ್ಯಕ್ತಿ ಗಣೇಶ್ ಪಂಜಿಮಾರು.
ಈ ಬಾರಿಯ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಆಯ್ಕೆ ಅವರಿಗೆ ಮತ್ತು ಅವರ ಬಂಧುವರ್ಗ, ಹಿತೈಷಿಗಳಿಗೆ ಸಂತಸ ಉಂಟು ಮಾಡಿದೆ.