ಕಾಪು : ಚಿತ್ರಕಲೆಯ ಮೂಲಕ ಸಾಧನೆಗೈದ ವಿಕಲಾಂಗ ಪ್ರತಿಭೆ ಗಣೇಶ್ ಪಂಜಿಮಾರ್ ಅವರಿಗೆ ಈ ಬಾರಿಯ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದು ಕಾಪು ಭಾಗದ ಸಮಸ್ತ ಕುಲಾಲರಿಗೆ ಖುಷಿ ತಂದು ಕೊಟ್ಟಿದೆ.
ಅಪೂರ್ವ ವ್ಯಕ್ತಿತ್ವದ ಗಣೇಶ್ ಪಂಜಿಮಾರ್ ಅವರ ಸಾಧನೆಯನ್ನ ಗುರುತಿಸಿದ ಎಲ್ಲಾ ಜನಪ್ರತಿನಿಧಿಗಳಿಗೆ ಹಾಗೂ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪ್ರಶಸ್ತಿ ಬರುವಲ್ಲಿ ಸಹಕರಿಸಿದ ಎಲ್ಲರಿಗೂ ಕಾಪು ಕುಲಾಲ ಸಂಘದ ಅಧ್ಯಕ್ಷರಾದ ಸಂದೀಪ್ ಬಂಗೇರ, ಪ್ರಧಾನ ಕಾರ್ಯದರ್ಶಿ ಉದಯ ಕುಲಾಲ್, ಮಹಿಳಾ ಘಟಕದ ಅಧ್ಯಕ್ಷೆ ಗೀತಾ ಕುಲಾಲ್ ಶಿರ್ವ, ಕಾಪು ಸಂಘದ ಕುಲಾಲ ಯುವ ವೇದಿಕೆ ಅಧ್ಯಕ್ಷರಾದ ಶಶಿಧರ್ ಕುಲಾಲ್ ಹಾಗೂ ಸಂಘದ ಸರ್ವ ಪದಾಧಿಕಾರಿಗಳು ಕೃತಜ್ಞತೆ ಸಲ್ಲಿಸಿದ್ದಾರೆ.