ಮೂಡಬೆಟ್ಟು ಸರ್ಕಾರಿಗುಡ್ಡೆ ಅಂಗನವಾಡಿ ಕೇಂದ್ರ ಪುನರಾರಂಭ - ಪುಟಾಣಿಗಳಿಗೆ ಸ್ವಾಗತ ಕೋರಿದ ಪಂಚಾಯತ್ ಸದಸ್ಯರು
Posted On:
08-11-2021 06:15PM
ಕಟಪಾಡಿ : ಕೋವಿಡ್ ನಿಂದ ನಿಂತು ಹೋಗಿದ್ದ ಅಂಗನವಾಡಿ ಕೇಂದ್ರಗಳು ಮತ್ತೆ ಪುನರಾಂಭ ಗೊಂಡಿದ್ದು ವಿಶೇಷ ರೀತಿಯಲ್ಲಿ ಮೂಡಬೆಟ್ಟು ಸರ್ಕಾರಿಗುಡ್ಡೆಯ ಅಂಗನವಾಡಿ ಕೇಂದ್ರವನ್ನು ಸ್ಯಾನಿಟೈಸ್ ಮಾಡಿ ಶಾಲೆಯನ್ನು ವಿವಿಧ ರೀತಿಯಲ್ಲಿ ಅಲಂಕಾರ ಮಾಡಿ ಮಕ್ಕಳಿಗೆ ಆರತಿ ಬೆಳಗಿಸಿ ಗುಲಾಬಿ ಹೂವು ಕೊಟ್ಟು ಹೂಗಳಿಂದ ವಿಶೇಷ ರೀತಿಯಲ್ಲಿ ಕಟಪಾಡಿ ಗ್ರಾಮ ಪಂಚಾಯತ್ ನ ವಾರ್ಡಿನ ಸದಸ್ಯರು ಸ್ವಾಗತಿಸಿದರು.
ಈ ಸಂದರ್ಭ ವಾರ್ಡಿನ ಪಂಚಾಯತ್ ಸದಸ್ಯರಾದ ಪ್ರಭಾಕರ ಆಚಾರ್ಯ ಅವರ ಮುತುವರ್ಜಿಯಿಂದ ಸಮಾಜ ಸೇವಕ ಕಿನ್ನಿಮೂಲ್ಕಿ ಕೃಷ್ಣಮೂರ್ತಿ ಆಚಾರ್ಯ ಅವರು ಕೊಡಲ್ಪಟ ಮಕ್ಕಳ ಚೇರ್ ಗಳನ್ನು ಪ್ರಭಾಕರ ಆಚಾರ್ಯ ಅವರು ಅಂಗನವಾಡಿ ಕಾರ್ಯಕರ್ತೆ ಕಾಂತಿ ಟೀಚರ್ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭ ವಾರ್ಡಿನ ಪಂಚಾಯತ್ ಸದಸ್ಯರಾದ ಆಗ್ನೇಸ್ ಡೇಸಾ, ಪ್ರಭಾಕರ ಆಚಾರ್ಯ, ಶಾಲಿನಿ ಚಂದ್ರ ಪೂಜಾರಿ , ಆಶಾ ಕಾರ್ಯಕರ್ತೆ ಜಯಶ್ರೀ ಆಚಾರ್ಯ, ಮಕ್ಕಳ ಪೋಷಕರು ಉಪಸ್ಥಿತರಿದ್ದರು.
ಪಂಚಾಯತ್ ಸದಸ್ಯರಾದ ಆಗ್ನೇಸ್ ಡೇಸಾ ಕಾರ್ಯಕ್ರಮ ನಿರ್ವಹಿಸಿ, ಬಾಲವಿಕಾಸ ಸಮಿತಿ ಅಧ್ಯಕ್ಷರು ಪೂರ್ಣಿಮಾ ಆಚಾರ್ಯ ಪ್ರಾರ್ಥನೆ ಮಾಡಿದರು, ಮಕ್ಕಳ ಪೋಷಕರ ಪರವಾಗಿ ಸುದರ್ಶನ್ ಹಾಗೂ ಸಮಿನ ಮಾತನಾಡಿದರು. ಕಾಂತಿ ಟೀಚರ್ ವಂದಿಸಿದರು.