ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಹಿಂದು ಜಾಗರಣ ವೇದಿಕೆ ಬೆಳಪು ಪಯ್ಯಾರು ಘಟಕದಿಂದ ಪ್ರಥಮ ವರ್ಷದ ಗೋಪೂಜೆ, ವಾಹನ ಪೂಜೆ

Posted On: 09-11-2021 08:43PM

ಕಾಪು : ಹಿಂದು ಜಾಗರಣ ವೇದಿಕೆ ಕಾಪು ತಾಲ್ಲೂಕಿನ ಬೆಳಪು-ಪಯ್ಯಾರ್ ಘಟಕದ ವತಿಯಿಂದ ಇಂದು ಪಯ್ಯಾರು ಮೈದಾನದಲ್ಲಿ ಸಾರ್ವಜನಿಕ ಗೋಪೂಜೆ ಮತ್ತು ವಾಹನ ಪೂಜೆ ಕಾರ್ಯಕ್ರಮ ನಡೆಯಿತು.

ಇದೇ ಸಂದರ್ಭದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತೆ ರಮಿತಾ ಶೈಲೇಂದ್ರರವರು ಸಭೆಯನ್ನುದ್ದೇಶಿಸಿ ಮಾತನಾಡಿದರು.

ಸಭಾಧ್ಯಕ್ಷತೆಯನ್ನು ಸಾಮಾಜಿಕ ಮುಖಂಡರಾದ ಗಣೇಶ್ ಶೆಟ್ಟಿಯವರು ವಹಿಸಿದ್ದರು. ಈ ಸಂಧರ್ಭದಲ್ಲಿ ಹಿಂಜಾವೇ ತಾಲೂಕು ಅಧ್ಯಕ್ಷರಾದ ಶಶಿಧರ್ ಹೆಗ್ದೆ , ಹಿಂಜಾವೇ ತಾಲ್ಲೂಕು ಪ್ರಧಾನ ಕಾರ್ಯದರ್ಶಿಯಾದ ಗುರುಪ್ರಸಾದ್ ಸೂಡ , ತಾಲೂಕು ಕಾರ್ಯದರ್ಶಿ ಮೋಹನ್ ದಾಸ್ , ತಾಲೂಕು ಪ್ರಮುಖರಾದ ರಾಜೇಶ್ ಕುಲಾಲ್ ಮತ್ತು ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು.