ಕಾಪು : ಭಾರತೀಯ ಜನತಾ ಪಾರ್ಟಿ ಮುದರಂಗಡಿ ಶಕ್ತಿ ಕೇಂದ್ರ ವತಿಯಿಂದ ಕೊರೊನ ವ್ಯಾಕ್ಸಿನೇಶನ್ ಅಭಿಯಾನದ ಯಶಸ್ಸಿನ ಕಾರಣಕರ್ತರಾದ ಆಶಾ ಕಾರ್ಯಕರ್ತರು, ದಾದಿಯರು ಹಾಗೂ ವೈದ್ಯಾಧಿಕಾರಿಗಳಿಗೆ ಗೌರವಾರ್ಪಣೆ ಜರಗಿತು.
ಈ ಸಂದರ್ಭ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಸುರೇಶ್ ಶೆಟ್ಟಿ ಗುರ್ಮೆ, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.