ಉಡುಪಿ : ರೋಟರಿ ಕ್ಲಬ್ ಸೈಬ್ರಕಟ್ಟೆ ಸದಸ್ಯರು ಮಣಿಪಾಲದ 'ಆಸರೆ' ವಿಶೇಷ ಮಕ್ಕಳ ಶಾಲೆಗೆ ತೆರಳಿ, ಮಂಗಳೂರಿನಲ್ಲಿ ನಡೆಯುವ ವಿಶೇಷ ಮಕ್ಕಳ ಜಿಲ್ಲಾಮಟ್ಟದ ಸೈಕಲ್ ಸ್ಪರ್ಧೆಯಲ್ಲಿ ಆಸರೆಯ ಮಕ್ಕಳು ಭಾಗವಹಿಸುವುದರಿಂದ ಅವರ ಅನುಕೂಲಕ್ಕಾಗಿ ರೋಟರಿ ಸೈಬ್ರಕಟ್ಟೆಯಿಂದ ಅಧ್ಯಕ್ಷ ಯು. ಪ್ರಸಾದ್ ಭಟ್ ಆಸರೆ ಟ್ರಸ್ಟ್ ನ ಅಧ್ಯಕ್ಷ ಜೈವಿಠಲ್ ಅವರಿಗೆ ಸೈಕಲ್ ಹಸ್ತಾಂತರ ಮಾಡಿದರು.
ಒಂದು ದಿನದ ಬೆಳಿಗ್ಗಿನ ಉಪಾಹಾರ ರೋಟರಿ ವತಿಯಿಂದ ಪ್ರಯೋಜಿಸಿ ನಗದು ನೀಡಲಾಯಿತು. ವಲಯ ಸೇನಾನಿ ಬ್ರಾನ್ ಡಿ ಸೋಜ ಕಾರ್ಯದರ್ಶಿ ಅಣ್ಣಯ್ಯದಾಸ್ , ನೀಲಕಂಠ ರಾವ್, ಶ್ರೀ ಕೃಷ್ಣ ಶಾನುಭೋಗ ಮತ್ತು ವಿಶೇಷ ಮಕ್ಕಳ ಶಿಕ್ಷಕ ರಮೇಶ್ ನಾಯ್ಕ ಮತ್ತು ಆಸರೆಯ ಎಲ್ಲ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.