ಕಾಪು : ಶ್ರೀ ದೇವಿ ಸ್ಪೋರ್ಟ್ಸ್ & ಕಲ್ಚರ್ ಕ್ಲಬ್ ಕಾಪು ಇವರ ವತಿಯಿಂದ ಕೇಂದ್ರ ಸರಕಾರದ ಕಾರ್ಮಿಕ ಇಲಾಖೆಯ ಅಡಿಯಲ್ಲಿ ಅಸಂಘಟಿತ ಕಾರ್ಮಿಕರ ನೋಂದಾವಣೆ ಪ್ರಕ್ರಿಯೆಯ 'ಇ-ಶ್ರಮ' ಕಾರ್ಡ್ ನೋಂದಾವಣೆಗೆ ಕಾಪು ಹೊಸ ಮಾರಿಗುಡಿ ಹಿಂದುಗಡೆಯ ಕಾಪು ಶ್ರೀ ದೂಮಾವತಿ ದೈವಸ್ಥಾನ ವಠಾರದಲ್ಲಿ ಚಾಲನೆ ನೀಡಲಾಯಿತು.
ಈ ಸಂದರ್ಭ ಕ್ಲಬ್ ನ ಅಧ್ಯಕ್ಷ ಅನಿಲ್ ಕುಮಾರ್, ಕಾರ್ಯದರ್ಶಿ ಶ್ರೀನಾಥ್ ಆಚಾರ್ಯ, ಕೋಶಾಧಿಕಾರಿ ಅನಿಲ್ ಪಾಡಿಮನೆ, ರಂಗ ಕೋಟ್ಯಾನ್, ರಾಜೇಶ್ ಅಂಚನ್, ಜಯಕರ್, ಸುಧಾಕರ್ ಹಾಗೂ ಕ್ಲಬ್ ನ ಸದಸ್ಯರು ಉಪಸ್ಥಿತರಿದ್ದರು.