ಧಾರ್ಮಿಕ ಕೇಂದ್ರದ ಗುರುಗಳ ಮೇಲೆ ಹಲ್ಲೆಗೆ ಪ್ರಯತ್ನ, ಧಾರ್ಮಿಕ ಕೇಂದ್ರದ ಹಾನಿಗೆ ಯತ್ನ, ಧಾರ್ಮಿಕ ಭಾವನೆಗೆ ಧಕ್ಕೆ ತಂದ ಮೂವರ ವಿರುದ್ಧ ಪ್ರಕರಣ ದಾಖಲು
Posted On:
15-11-2021 10:39PM
ಮಂಗಳೂರು : ಕೊಣಾಜೆ ಠಾಣಾ ವ್ಯಾಪ್ತಿಯ ಕುರ್ನಾಡು ಗ್ರಾಮದ ಧಾರ್ಮಿಕ ಕೇಂದ್ರ ಗುರುಗಳ ಮೇಲೆ ಹಲ್ಲೆಗೆ ಯತ್ನ, ಅವ್ಯಾಚ್ಯ ಶಬ್ದಗಳಿಂದ ಕೋಮು ಧರ್ಮನಿಂದನೆ ಮಾಡಿದ ಮೂವರ ಮೇಲೆ ದೂರು ದಾಖಲಾಗಿದೆ.
ಶರಣ್, ವಿಘ್ನೇಶ್, ಹರ್ಷಿತ್ ಇವರು ಗುರುಗಳ ಮೇಲೆ ಹಲ್ಲೆಗೆ ಪ್ರಯತ್ನ, ಧಾರ್ಮಿಕ ಕೇಂದ್ರದ ಹಾನಿಗೆ ಯತ್ನ ಜೊತೆಗೆ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಉದ್ದೇಶ ಇವರದ್ದಾಗಿದೆ ಎಂದು ಅಬ್ದುಲ್ ಸಮೀರ್ ಎಂಬುವವರು ಕೊಣಾಜೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಬಗ್ಗೆ ಕೊಣಾಜೆ ಠಾಣೆ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.