ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಎಬಿವಿಪಿ ಬಜಗೋಳಿ ಕಾಲೇಜು ಘಟಕದಿಂದ ಕಾಲೇಜಿನ ಸಮಸ್ಯೆಗಳ ಪರಿಹಾರಕ್ಕಾಗಿ ತಹಶಿಲ್ದಾರರಿಗೆ ಮನವಿ

Posted On: 16-11-2021 05:09PM

ಕಾರ್ಕಳ : ಬಜಗೋಳಿ ಸರಕಾರಿ ಪದವಿ ಪೂರ್ವ ಕಾಲೇಜಿನ ಬಾಲಕರ ಶೌಚಾಲಯದ ಸಮಸ್ಯೆಯು ಇದೇ ಶೈಕ್ಷಣಿಕ ವರ್ಷದಲ್ಲಿ ಪರಿಹಾರ ಕಾಣಬೇಕು ಮತ್ತು ಇತರೆ ಶೈಕ್ಷಣಿಕ ಸಮಸ್ಯೆಗಳಿಗೂ ಆದಷ್ಟು ಬೇಗ ಪರಿಹಾರ ದೊರಕಿಸಿಕೊಡಬೇಕೆಂದು ಕಾರ್ಕಳದ ತಹಶಿಲ್ದಾರರಾದ ಪ್ರಕಾಶ್ ಎಸ್ ಮರಬಳ್ಳಿ ಇವರಿಗೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಕಳ ತಾಲೂಕಿನ ಬಜಗೋಳಿ ಕಾಲೇಜು ಘಟಕದಿಂದ ಮನವಿ ಸಲ್ಲಿಸಲಾಯಿತು.

ಈ ಸಂದರ್ಭ ರಾಜ್ಯಕಾರ್ಯಕಾರಿಣಿ ಸದಸ್ಯ ಯುಕೇಶ್ ಉಜಿರೆ, ತಾಲೂಕು ಸಂಚಾಲಕ ಕಾಬೆಟ್ಟು ಮನೀಶ್ ಕುಲಾಲ್, ತಾಲೂಕು ವಿದ್ಯಾರ್ಥಿನಿ ಪ್ರಮುಖ್ ಕಾಂತಿಶ್ರೀ, ನಗರ ಹೋರಾಟ ಪ್ರಮುಖ್ ಮನೋಜ್, ನಗರ ವಿದ್ಯಾರ್ಥಿನಿ ಪ್ರಮುಖ್ ಮುಕ್ತಿವರ್ಧನ, ಸಾಮಾಜಿಕ ಜಾಲತಾಣ ಸಹಪ್ರಮುಖ್ ಆಕಾಶ್, ಹಾಗೂ ಪ್ರಮುಖ ಕಾರ್ಯಕರ್ತರಾದ ಅನ್ವಿತ ಶರ್ಮ,ರಂಜನ್, ಕೀರ್ತಿಕ್, ಕಿರಣ್, ಮಂಜುಪ್ರಸಾದ್, ಅಕ್ಷಯ್ ಉಪಸ್ಥಿತರಿದ್ದರು.