ಕಾರ್ಕಳ : ಬಜಗೋಳಿ ಸರಕಾರಿ ಪದವಿ ಪೂರ್ವ ಕಾಲೇಜಿನ ಬಾಲಕರ ಶೌಚಾಲಯದ ಸಮಸ್ಯೆಯ ಕುರಿತು ಅ.ಭಾ.ವಿ.ಪ ಕಾರ್ಕಳ ತಾಲೂಕು ತಂಡ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ರಾಜ್ಯಸರಕಾರದ ಇಂಧನ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಸಚಿವರಾದ ವಿ ಸುನೀಲ್ ಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ಶಾಸಕರು ಆದಷ್ಟು ಬೇಗ ಶೌಚಾಲಯ ನಿರ್ಮಿಸಿ ಕೊಡಲು ₹5 ಲಕ್ಷ ಶೀಘ್ರವಾಗಿ ಬಿಡುಗಡೆಗೊಳಿಸಿ ಕಾಮಗಾರಿ ಆರಂಭಿಸುವ ಭರವಸೆಯನ್ನು ನೀಡಿದರು.
ಈ ಸಂದರ್ಭ ರಾಜ್ಯಕಾರ್ಯಕಾರಿಣಿ ಸದಸ್ಯ ಯುಕೇಶ್ ಉಜಿರೆ, ತಾಲೂಕು ಸಂಚಾಲಕ ಕಾಬೆಟ್ಟು ಮನೀಶ್ ಕುಲಾಲ್, ತಾಲೂಕು ವಿದ್ಯಾರ್ಥಿನಿ ಪ್ರಮುಖ್ ಕಾಂತಿಶ್ರೀ, ನಗರ ಹೋರಾಟ ಪ್ರಮುಖ್ ಮನೋಜ್, ನಗರ ವಿದ್ಯಾರ್ಥಿನಿ ಪ್ರಮುಖ್ ಮುಕ್ತಿವರ್ಧನ, ಸಾಮಾಜಿಕ ಜಾಲತಾಣ ಸಹಪ್ರಮುಖ್ ಆಕಾಶ್, ಹಾಗೂ ಪ್ರಮುಖ ಕಾರ್ಯಕರ್ತರಾದ ಅನ್ವಿತ ಶರ್ಮ,ರಂಜನ್, ಕೀರ್ತಿಕ್,ಕಿರಣ್, ಮಂಜುಪ್ರಸಾದ್, ಅಕ್ಷಯ್ ಉಪಸ್ಥಿತರಿದ್ದರು.