ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಉದ್ಯಾವರ : ಶ್ರೀ ವಿಠೋಬ ರುಖುಮಾಯಿ ನಾರಾಯಣಗುರು ಮಂದಿರದ 77ನೇ ವಾರ್ಷಿಕ ಮಂಗಲೋತ್ಸವ

Posted On: 13-01-2022 08:50PM

ಉದ್ಯಾವರ : ಇಲ್ಲಿನ ಬಿಲ್ಲವ ಮಹಾಜನ ಸಂಘ (ರಿ.) ಇದರ ಶ್ರೀ ವಿಠೋಬ ರುಖುಮಾಯಿ ನಾರಾಯಣಗುರು ಮಂದಿರದಲ್ಲಿ 77ನೇ ವಾರ್ಷಿಕ ಮಂಗಲೋತ್ಸವವು ಜರಗಲಿದೆ.

ಜನವರಿ 3ರಿಂದ ಮೊದಲ್ಗೊಂಡು 12ರ ತನಕ ನಗರಭಜನೆ, 13ರಂದು ಮಧ್ಯಾಹ್ನ ಗಂಟೆ 12-15ಕ್ಕೆ ಕಲಶ ಪ್ರತಿಷ್ಠೆಯಾಗಿ ಮರುದಿನ 14, ಶುಕ್ರವಾರ ಪೂರ್ವಾಹ್ನ ಗಂಟೆ 9ರ ಪರ್ಯಂತ ನಡೆಯಲಿರುವ ಸಪ್ತಝಾಮದ ಶ್ರೀ ದೇವಿ ಭಜನಾ ಸಪ್ತಾಹ ಮಹೋತ್ಸವ, ಮಧ್ಯಾಹ್ನ 1ಕ್ಕೆ ಅನ್ನಸಂತರ್ಪಣೆ ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ‌.