ಅಸಹಾಯಕಳಾಗಿದ್ದ ಮೂಕ ಮಹಿಳೆಯನ್ನು ರಕ್ಷಿಸಿದ ವಿಶು ಶೆಟ್ಟಿ ಅಂಬಲಪಾಡಿ
Posted On:
25-01-2022 10:45AM
ಉಡುಪಿ : ಕಾಪು ಠಾಣಾ ವ್ಯಾಪ್ತಿಯ ಇನ್ನಂಜೆಯಲ್ಲಿ ತನ್ನವರು ಯಾರೂ ಇಲ್ಲದೆ ಅಸಹಾಯಕಳಾಗಿ ರೋಧಿಸುತ್ತಿದ್ದ ಮೂಕ ಮಹಿಳೆಯನ್ನು ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿ ನಿಟ್ಟೂರಿನ ಸಖಿ ಸೆಂಟರ್ ಗೆ ದಾಖಲಿಸಿದ ಘಟನೆ ಜನವರಿ 24ರಂದು ನಡೆದಿದೆ.
ಮಹಿಳೆ ನಳಿನಿ ದೇವಾಡಿಗ (45) ಕೆಲವು ವರ್ಷಗಳ ಹಿಂದೆ ಮದುವೆಯಾಗಿದ್ದು, ಪತಿ ತೊರೆದಿದ್ದು ತಂದೆ ತಾಯಿ ಸಹೋದರ ಮೃತರಾಗಿದ್ದಾರೆ. ರಾತ್ರಿಯ ಹೊತ್ತು ಅಸಹಾಯಕಳಾಗಿ ರೋಧಿಸುತ್ತಿದ್ದಾಗ ಸ್ಥಳೀಯ ಮಹಿಳೆಯೊಬ್ಬರು ಉಪಚರಿಸಿ ಆಹಾರ ನೀಡಿದ್ದರು.
ಈ ಬಗ್ಗೆ ವಿಷಯ ತಿಳಿದ ವಿಶು ಶೆಟ್ಟಿ ತನ್ನ ವಾಹನದಲ್ಲಿ ತೆರಳಿ ಮಹಿಳೆಯನ್ನು ಇಲಾಖಾ ಸಿಬ್ಬಂದಿ ಪೂರ್ಣಿಮಾ ಸಹಕಾರದಿಂದ ರಕ್ಷಿಸಿ ಸಖಿ ಸೆಂಟರ್ ಗೆ ದಾಖಲಿಸಿದ್ದರು. ಬಾಯಿ ಬಾರದ ಅಸಹಾಯಕ ಮಹಿಳೆಗೆ ಭವಿಷ್ಯತ್ತಿನಲ್ಲಿ ಸಂಬಂಧಪಟ್ಟವರು ಅಥವಾ ಸಮಾಜ ಸಹಕರಿಸಿ ಮಹಿಳೆಯ ನೋವಿಗೆ ಸ್ಪಂದಿಸಬೇಕಾಗಿ ವಿಶು ಶೆಟ್ಟಿ ವಿನಂತಿಸಿದ್ದಾರೆ.