ನಾಳೆ ರಾಷ್ಟ್ರರಾಜಧಾನಿಯಲ್ಲಿ ಕಂಗೊಳಿಸಲಿದೆ ತುಳುನಾಡ ಕಂಗೀಲು
Posted On:
25-01-2022 08:19PM
ಕಾಪು : ನಾಳೆ ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪೆರೇಡ್ ನ ಸ್ತಬ್ಧಚಿತ್ರ ಪ್ರದರ್ಶನದಲ್ಲಿ ಕರ್ನಾಟಕದಿಂದ ಜಾನಪದ ಮತ್ತು ಶಾಸ್ತ್ರೀಯ ನೃತ್ಯ ತಂಡಗಳು ಭಾಗವಹಿಸಲಿದ್ದು, ಇದರಲ್ಲಿ ತುಳುನಾಡಿನ ಕಂಗೀಲು ನೃತ್ಯವು ನಾಳೆ ಪ್ರದರ್ಶನಗೊಳ್ಳಲಿದೆ.
ಉಡುಪಿಯ ಉಡುಪಿ ಫೀಟ್ಸ್ ತಂಡವು ಕಂಗೀಲು ನೃತ್ಯವನ್ನು ಪ್ರದರ್ಶಿಸಲಿದೆ. ನಾಲ್ಕು ಸುತ್ತಿನ ಸ್ಪರ್ಧೆಯನ್ನು ಎದುರಿಸಿ ಆಯ್ಕೆಯಾದ ಈ ತಂಡದಲ್ಲಿ 14 ಸದಸ್ಯರಿದ್ದಾರೆ. ಇವರೆಲ್ಲರೂ ಉಡುಪಿಯ ಪ್ರತಿಷ್ಠಿತ ಕಾಲೇಜುಗಳ ವಿದ್ಯಾರ್ಥಿಗಳಾಗಿದ್ದಾರೆ.
ಈ ಮೂಲಕ ತುಳುನಾಡಿನ ಜಾನಪದ ಕಲೆಯು ರಾಷ್ಟ್ರ ರಾಜಧಾನಿಯ ಮೂಲಕ ಇಡೀ ದೇಶದ ಜನರ ಗಮನ ಸೆಳೆಯಲಿದೆ.