ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪು : ಕರಾವಳಿ ವಾರ್ಡ್ನ ಗಟ್ಟಿ ಧ್ವನಿ ಕಿರಣ್ ಆಳ್ವ

Posted On: 29-01-2022 07:13PM

ಕಾಪು : ಈಗಾಗಲೇ ಕಾಪು ಪುರಸಭೆಯ ಚುನಾವಣಾ ಕಾವು ಮುಗಿದು ಗೆದ್ದವರೆಲ್ಲಾ ಗದ್ದುಗೆಯ ಬಗ್ಗೆ ಯೋಚಿಸುತ್ತಿದ್ದರೆ ಇಲ್ಲೊಬ್ಬ ಜನಪರ ಕಾರ್ಯದಲ್ಲಿ ತೊಡಗಿದ್ದಾರೆ ಅವರೇ ಕರಾವಳಿ ವಾರ್ಡ್ ಇದರ ಸದಸ್ಯ ಕಿರಣ್ ಆಳ್ವ. ಕಾಪು ಪುರಸಭೆಯ ಗಟ್ಟಿ ಧ್ವನಿಯಾಗುವುದರಲ್ಲಿ ಎರಡು ಮಾತಿಲ್ಲ ಎಂಬುದು ಸಾರ್ವಜನಿಕರ ಮಾತು.

ಶಾಸಕ ಲಾಲಾಜಿ ಮೆಂಡನ್ ಮತ್ತು ಉದ್ಯಮಿ ಸರ್ವೋತ್ತಮ್ ಕುಂದರ್ ಅವರ ಮಾರ್ಗದರ್ಶನದಲ್ಲಿ ನರೇಶ್, ಯೋಗಿಶ್, ಪ್ರತೀಕ್, ನಾಗೇಶ್ ಯುವಕರ ತಂಡವನ್ನು ಕಟ್ಟಿಕೊಂಡು ಹಗಲಿರುಳು ಶ್ರಮಿಸುತ್ತಿದ್ದಾರೆ.

ಕರಾವಳಿ ವಾರ್ಡ್ ಮತ್ತು ಬೀಚ್ ರಸ್ತೆಯಲ್ಲಿ ವಿನೂತನ ಯೋಜನೆಗಳ ಮೂಲಕ ಪ್ರವಾಸಿಗರ ಸ್ವರ್ಗವಾಗುತ್ತಿದೆ. ಇದೆಲ್ಲವೂ ಸಾಧ್ಯವಾಗಿರುವುದು ಕಿರಣ್ ಆಳ್ವ ಎಂಬ ಸಾಮಾನ್ಯ ಜನಪ್ರತಿನಿಧಿಯಿಂದಾಗಿ. ಇವರ ಕಾರ್ಯ ವೈಖರಿಯನ್ನು ಉಳಿದ ಸದಸ್ಯರು ಪಾಲಿಸಿದರೇ ಕಾಪು ಪುರಸಭಾ ವ್ಯಾಪ್ತಿಯು ಸಂಪೂರ್ಣ ಅಭಿವೃದ್ಧಿ ಹೊಂದುವುದು ಖಚಿತ.