ಶಿರ್ವ : ಕಿಡಿಗೇಡಿಗಳು ಮಂಗಗಳಿಗೆ ವಿಷವುಣಿಸಿ ಅವುಗಳು ಸಾವನ್ನಪ್ಪುವಂತೆ ಮಾಡಿದ ಘಟನೆ ಮೂಡುಬೆಳ್ಳೆಯಲ್ಲಿ ನಡೆದಿದೆ.
ಸಾವನ್ನಪ್ಪಿದ ಮಂಗಗಳಿಗೆ ಕ್ರಮಪ್ರಕಾರವಾಗಿ ಅಂತ್ಯಸಂಸ್ಕಾರವನ್ನು ವಿಶ್ವಹಿಂದೂ ಪರಿಷತ್ ಭಜರಂಗದಳ ಮೂಡುಬೆಳ್ಳೆಯ ಕಾರ್ಯಕರ್ತರು ಮಾಡಿದರು.
ಈ ಸಂದರ್ಭದಲ್ಲಿ ವಿ,ಹಿಂ,ಪ ಶಿರ್ವ ವಲಯಾಧ್ಯಕ್ಷರಾದ ವಿಖ್ಯಾತ ಭಟ್, ಭಜರಂಗದಳ ಮೋಕ್ಷಗಿರಿ ಘಟಕದ ಸಂಚಾಲಕ ನಿಶಾಂತ್ ಪೂಜಾರಿ, ನವೀನ್ ಶೆಟ್ಟಿ ನೆಲ್ಲಿಕಟ್ಟೆ, ಮಂಜುನಾಥ ತಿರ್ಲಪಲ್ಕೆ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.