ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಬೈಂದೂರು : ನಾಡ ಗುಡ್ಡೆಅಂಗಡಿ ಕ್ಲಿನಿಕ್ನಲ್ಲಿ ಅಕ್ರಮ ಔಷಧಿ ದಾಸ್ತಾನು ವಶ

Posted On: 15-02-2022 05:28PM

ಬೈಂದೂರು : ಲೈಸೆನ್ಸ್ ಇಲ್ಲದೆ ತಮ್ಮ ಕ್ಲಿನಿಕ್ಕಿನಲ್ಲಿ ಅಲೋಪತಿ ಔಷಧಿ ದಾಸ್ತಾನು ಮಾಡಿಕೊಂಡಿದ್ದ ಉಡುಪಿ ಜಿಲ್ಲೆಯ ಬೈಂದೂರು ಹಾಗೂ ಕುಂದಾಪುರ ತಾಲೂಕಿನ ಕೆಲವು ಆಯುರ್ವೇದ ವೈದ್ಯರ ಕ್ಲಿನಿಕ್ ಮೇಲೆ ಸೋಮವಾರ ಬೆಳ್ಳಂಬೆಳಗ್ಗೆ ಡ್ರಗ್ ಕಂಟ್ರೋಲ್ ಅಧಿಕಾರಿಗಳ ತಂಡ ದಾಳಿ ನಡೆಸಿದೆ.

ಈ ಹಿಂದೆ ಬೆಂಗಳೂರು ಪತ್ರಿಕೆಯೊಂದು ಕಾಲ್ತೋಡು ಸುಜಾತ ಕ್ಲಿನಿಕ್ ಮತ್ತು ಗೋಳಿಹೊಳಿ ಶ್ರೀ ದುರ್ಗ ಕ್ಲಿನಿಕ್ ಡಾಕ್ಟರ್ ಕ್ರಮಕಾಂಡದ ಸ್ಟಿಂಗ್ ಮಾಡಿ ಡಾಕ್ಟರ್ ಕ್ರಮ ಕೈಗೊಳ್ಳಿ ಎಂದು ಹೇಳಿದರು DHO ಆತನ ಒಂದು ಕ್ಲಿನಿಕ್ ಮುಚ್ಚಿಸಿದ ಹಾಗೆ ನಾಟಕ ಮಾಡಿ ಅವನ ವಿರುದ್ಧ ಕಾನೂನು ತೆಗೆದುಕೊಳ್ಳದೆ, ರಾಜಕೀಯ ಒತ್ತಡಕ್ಕೆ ಮಣಿದು ಆಯುರ್ವೇದ ಡಾಕ್ಟರ್ ಅಲೋಪತಿ ಔಷಧಗಳನ್ನು ಜನರಿಗೆ ನೀಡಿ ಅಲೋಪತಿ ದಾಸ್ತಾನು ಸ್ಟಾಕ್ ಇರಿಸಿದರು ಡಾಕ್ಟರ್ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವುದು ಗೋಳಿಹೊಳೆ ಮತ್ತು ಕಾಲ್ತೋಡು ಗ್ರಾಮಸ್ಥರ ಆರೋಪ. ಇದರಿಂದ ಎಚ್ಚೆತ್ತುಕೊಂಡ ಅಧಿಕಾರಿಗಳು ಬೈಂದೂರು ತಾಲೂಕು ನಾಡಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಉಷಾ ಕ್ಲಿನಿಕ್ ಡಾ। ಸುರೇಶ್ ಕುಮಾರ್ ಶೆಟ್ಟಿಯವರ ಕ್ಲಿನಿಕ್ಕಿಗೆ ಆಗಮಿಸಿದ ADC ನಾಗರಾಜ್ ಕೆ.ವಿ ಅವರು ತಪಾಸಣೆ ನಡೆಸಿ, ಅಕ್ರಮ ದಾಸ್ತಾನು ಮಾಡಿದ್ದ ಸುಮಾರು 8ಲಕ್ಷಕ್ಕೂ ಮಿಕ್ಕಿದ ಅಲೋಪತಿ ಔಷಧಿಯನ್ನು ವಶಪಡಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿ ನಂಜು ನಾಯ್ಕ್ ಅವರು ತಮ್ಮ ಸಿಬ್ಬಂದಿಯೊಂದಿಗೆ ಉಪಸ್ಥಿತರಿದ್ದು ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡರು.

ಅಕ್ರಮ ಔಷಧಿ ಮಾರಾಟ ಜಾಲ ವ್ಯವಸ್ಥಿತವಾಗಿ ನಡೆದಿತ್ತು. ಇದನ್ನು ಕುಂದಾಪುರ ಹಾಗೂ ಬೈಂದೂರು ತಾಲೂಕು ವರದಿಗಾರರು ಬಯಲಿಗೆಳೆದಿದ್ದು ಗಮನಾರ್ಹ. ನಿನ್ನೆ ಸಹ ದಾಳಿಯ ವೇಳೆ ಮಾಧ್ಯಮ ಮಿತ್ರರು ಫೋಟೋ ಮತ್ತು ವಿಡಿಯೋ ಮಾಡುವಾಗ ಡಾಕ್ಟರ್ ಸುರೇಶ್ ಕುಮಾರ್ ಶೆಟ್ಟಿ ಮಾಧ್ಯಮದವರ ವಿಡಿಯೋನೆ ಮಾಡಲು ಹೊರಟಾಗ ADC ನಾಗರಾಜ್ ಕೆವಿಯವರು ಡಾಕ್ಟರ್ ಮೊಬೈಲ್ ತೆಗೆದುಕೊಂಡು ಚಿತ್ರೀಕರಿಸಿ ವಿಡಿಯೋನು ಡಿಲೀಟ್ ಮಾಡಿಸಿ ಖಡಕ್ ವಾರ್ನಿಂಗ್ ಸ್ಥಳದಲ್ಲೇ ನೀಡಿದ್ದಾರೆ. ಆದರೆ ಆ ಮಾಧ್ಯಮಗಳ ವರದಿಗಾರರಿಗೆ ಬೆದರಿಕೆ ಹಾಕಲಾಗುತ್ತಿದ್ದು ಪೊಲೀಸರು ಸೂಕ್ತ ರಕ್ಷಣೆ ನೀಡಬೇಕೆಂದು ಕೋರಲಾಗಿದೆ.