ಉಡುಪಿ : ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ದೈವಸ್ಥಾನ ಮಲ್ಲಂಪಳ್ಳಿ ಪೆರಂಪಳ್ಳಿಯಲ್ಲಿ ಮಾಚ್೯ 5 ಮತ್ತು 6ರಂದು ಜರಗಲಿರುವ ಸಿರಿ ಸಿಂಗಾರ ನೇಮೋತ್ಸವದ ವೈಭವದ ಹೊರಕಾಣಿಕೆ ಮೆರವಣಿಗೆಗೆ ನಿತಿನ್ ಪೂಜಾರಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಅಧ್ಯಕ್ಷರಾದ ಕೆ ಯಾದವ್ ಆಚಾರ್ಯ, ಗೌರವ ಅಧ್ಯಕ್ಷರಾದ ರಾಧಾಕೃಷ್ಣ, ಆಡಳಿತ ಮಂಡಳಿ ಸದಸ್ಯರಾದ ವಿನೋದ್ ಶೆಟ್ಟಿ, ಸುರೇಶ್ ಪಾಲನ್, ಕೃಷ್ಣ ನಾಯ್ಕ್, ಗುರಿಕಾರರು, ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ಹಾಗೂ ಊರಿನ ಹತ್ತು ಸಮಸ್ತರು ಉಪಸ್ಥಿತಿಯಿದ್ದರು.
ಮಾಹಿತಿ : ಸಮಿತ್ ಶೆಟ್ಟಿ ಪರ್ಕಳ