ಮುದರಂಗಡಿ : ಇಲ್ಲಿನ ಪಂಚಾಯತ್ ವ್ಯಾಪ್ತಿಯ ಮೂಡು ದಡ್ಡು ಕ್ರಿಶ್ಚಿಯನ್ ಕುಟುಂಬಗಳ ಸುಮಾರು ಇಪ್ಪತ್ತೈದು ವರ್ಷಗಳ ಬೇಡಿಕೆಯಾದ ದಿವಂಗತ ಜೋಜ್೯ ಮೆಂಡೋನ್ಸ ರಸ್ತೆಗೆ ಕಾಂಕ್ರಿಟೀಕರಣಕ್ಕಾಗಿ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ರೂ. ಹತ್ತು ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆಯನ್ನು ಶಾಸಕರಾದ ಲಾಲಾಜಿ. ಆರ್ ಮೆಂಡನ್ ರವರು ಉದ್ಘಾಟಿಸಿದರು.
ರಸ್ತೆಗೆ ಅನುದಾನ ತರುವಲ್ಲಿ ಶ್ರಮಿಸಿದ ಸೂಡ ಶಂಕರ್ ಕುಂದರ್ ಸ್ಥಳೀಯರಾದ ಫ್ರೀಡ ಮೆಂಡೋನ್ಸ, ಗುತ್ತಿಗೆದಾರ ಅಂಬಿಕಾ ಪ್ರಸಾದ್ ವಿಜಯಕೃಷ್ಣ ಸೂಡ, ಜಗದೀಶ್ ಆಚಾರ್ಯ, ಮುದರಂಗಡಿ ಪಂಚಾಯತ್ ಸದಸ್ಯರಾದ ಶಿವರಾಮ್ ಭಂಡಾರಿ, ಮುದರಂಗಡಿ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ, ಹಿರಿಯ ನಾಗರಿಕರಾದ ಡೇವಿಡ್ ಕೊರೆಯಾ, ಸ್ಥಳೀಯರು ಉಪಸ್ಥಿತರಿದ್ದರು.
ಫಿಲೊಮಿನ ಮೆಂಡೋನ್ಸ ಸ್ವಾಗತಿಸಿ, ಜೇರಿ ಎಲ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು. ಫಾ| ಜೆರೋಂ ಮೊಂತೇರೋ ವಂದಿಸಿದರು.