92ನೇ ಹೇರೂರು :ಬಂಟಕಲ್ಲು- ವಿಕಾಸ ಸೇವಾ ಸಮಿತಿ, ದಾನಿಗಳ ನೆರವಿನಿಂದ ನೀಡಲ್ಪಟ್ಟ 5 ನಾಮ ಫಲಕದ ಅನಾವರಣ
Posted On:
13-03-2022 09:26PM
ಕಾಪು : ನಾನೇ ಎಂಬ ಭಾವವನ್ನು ಬಿಟ್ಟು ನಾವು ಎಂಬ ಭಾವನೆ ಇದ್ದರೆ ದೈವಾನುಗ್ರಹ ಸದಾ ನಮಗಿರುತ್ತದೆ ಎಂದು ಹೇರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ರಮಾನಾಥ ಶೆಟ್ರವರು ಹೇಳಿದರು.
ಅವರು ಬಂಟಕಲ್ಲು- ವಿಕಾಸ ಸೇವಾ ಸಮಿತಿ 92ನೇ ಹೇರೂರು ಇದರ ವತಿಯಿಂದ ದಾನಿಗಳ ನೆರವಿನಿಂದ ಕೊಡಮಾಡಿದ 5 ನಾಮ ಫಲಕದ ಅನಾವರಣವನ್ನು ನೇರವೇರಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹೇರೂರು ಗ್ರಾಮ ಪಂಚಾಯತ್ ಸದಸ್ಯ ವಿಜಯ ಧೀರಜ್ ರವರು ಮಾತನಾಡಿ ಸ್ಥಾಪನೆಗೊಂಡು 2 ವರ್ಷಗಳ ಅವಧಿಯಲ್ಲಿ ಇಂತಹ ಸಮಾಜಮುಖಿ ಕಾರ್ಯಕ್ರಮಗಳನ್ನು ಸಂಸ್ಥೆ ಮಾಡುತ್ತಿರುವುದು ಶ್ಲಾಘನೀಯ. ಸಾರ್ವಜನಿಕರ ಸಹಕಾರ ನಿಮಗೆ ಸದಾ ಇರಲಿ ಎಂದು ಶುಭ ಹಾರೈಸಿದರು.
ಸಮಿತಿಯ ಗೌರವಾಧ್ಯಕ್ಷ ಗಣಪತಿ ಆಚಾರ್ಯ, ಮಹಿಳಾ ಬಳಗದ ಅಧ್ಯಕ್ಷೆ ವಿಜಯಾ ವಿಘ್ನೇಶ್ವರ ಆಚಾರ್ಯ ಉಪಸ್ಥಿತರಿದ್ದರು. ಸಮಿತಿಯ ಅಧ್ಯಕ್ಷ ಮಾಧವ ಆಚಾರ್ಯ ಸ್ವಾಗತಿಸಿದರು. ಮಹಿಳಾ ಬಳಗದ ಕಾರ್ಯದರ್ಶಿ ಗ್ರಾಮ ಪಂಚಾಯತ್ ಸದಸ್ಯೆ ಮಂಜುಳಾ ಗಣೇಶ್ ಆಚಾರ್ಯ ವಂದಿಸಿದರು.