ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕ್ಯಾನ್ಸರ್ ಇದೆಯೆಂದು ಆತ್ಮಹತ್ಯೆ ಮಾಡಿಕೊಂಡ ಮಹಿಳಾ ಉದ್ಯಮಿ

Posted On: 15-03-2022 10:09PM

ಮಂಗಳೂರು : ತನಗೆ ಕ್ಯಾನ್ಸರ್ ಇರುವ ಬಗ್ಗೆ ಮಾಹಿತಿ ಅರಿತು ಇದರಿಂದ ಮನನೊಂದು ಮಂಗಳೂರಿನ ಜವಳಿ ಸಂಸ್ಥೆಯ ಮಾಲಿಕರೋರ್ವರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಮಣ್ಣಗುಡ್ಡದಲ್ಲಿ ನಡೆದಿದೆ.

ಪ್ರಖ್ಯಾತ ಜವಳಿ ಸಂಸ್ಥೆ ಪಿ.ಕೆ ದೂಜಪೂಜಾರಿ ಇವರ ಭೂಮಿಕಾ ಜವಳಿ ಸಂಸ್ಥೆಯ ಮಾಲಿಕರಾದ ಸುಮ ಸತೀಶ್ ಮಾಚ್೯ 15ರ ಬೆಳಿಗ್ಗೆ ಮಣ್ಣಗುಡ್ಡದಲ್ಲಿರುವ ಅಭಿಮಾನ್ ಮ್ಯಾನ್ಷನ್ ನ ತಮ್ಮ ಗೃಹದ ಬಾಲ್ಕನಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.