ಮಂಗಳೂರು : ತನಗೆ ಕ್ಯಾನ್ಸರ್ ಇರುವ ಬಗ್ಗೆ ಮಾಹಿತಿ ಅರಿತು ಇದರಿಂದ ಮನನೊಂದು ಮಂಗಳೂರಿನ ಜವಳಿ ಸಂಸ್ಥೆಯ ಮಾಲಿಕರೋರ್ವರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಮಣ್ಣಗುಡ್ಡದಲ್ಲಿ ನಡೆದಿದೆ.
ಪ್ರಖ್ಯಾತ ಜವಳಿ ಸಂಸ್ಥೆ ಪಿ.ಕೆ ದೂಜಪೂಜಾರಿ ಇವರ ಭೂಮಿಕಾ ಜವಳಿ ಸಂಸ್ಥೆಯ ಮಾಲಿಕರಾದ ಸುಮ ಸತೀಶ್ ಮಾಚ್೯ 15ರ ಬೆಳಿಗ್ಗೆ ಮಣ್ಣಗುಡ್ಡದಲ್ಲಿರುವ ಅಭಿಮಾನ್ ಮ್ಯಾನ್ಷನ್ ನ ತಮ್ಮ ಗೃಹದ ಬಾಲ್ಕನಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.