ಕಾಪು : ಇಲ್ಲಿನ ಪಣಿಯೂರು ನಾಂಜಾರು ಶ್ರೀ ಧರ್ಮ ಜಾರಂದಾಯ ದೈವಸ್ಥಾನದಲ್ಲಿ ಶ್ರೀ ಧರ್ಮ ಜಾರಂದಾಯ ಹಾಗೂ ಪರಿವಾರ ದೈವಗಳ ವಾರ್ಷಿಕ ಸಿರಿ-ಸಿಂಗಾರದ ನೇಮವು ಏಪ್ರಿಲ್ 21ರಂದು ಜರಗಲಿದೆ.
ಬೆಳಿಗ್ಗೆ ಗಂಟೆ 12ರಿಂದ ಚಪ್ಪರ ಏರುವುದು, ಸಂಜೆ 5:30ಕ್ಕೆ ಭಂಡಾರ ಇಳಿಯುವುದು, ರಾತ್ರಿ ಗಂಟೆ
7: 30ರಿಂದ ಅನ್ನಸಂತರ್ಪಣೆ, ರಾತ್ರಿ ಗಂಟೆ 9 ರಿಂದ ಸಿರಿ-ಸಿಂಗಾರದ ನೇಮ, ರಾತ್ರಿ ಗಂಟೆ 1ರಿಂದ ಶ್ರೀ ಧರ್ಮ ಜಾರಂದಾಯ ದೈವದ ಬಂಡಿ ಸವಾರಿ ಜರಗಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.