ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಮೇ 6 : ಉಚಿತ ಶ್ರವಣ ದೋಷ ತಪಾಸಣೆ ಹಾಗೂ ಶ್ರವಣಯಂತ್ರ ವಿತರಣಾ ಶಿಬಿರ

Posted On: 29-04-2022 05:40PM

ಉಡುಪಿ : ಸಂದೀಪ್ ಶೆಟ್ಟಿ ಕಲ್ಲಪಾಪು, 80 ಬಡಗಬೆಟ್ಟು, ಮುಕೇಶ್ ಕುಮಾರ್ ಕೆರೆಕಾಡು, ಮೂಲ್ಕಿ ಸಹಕಾರದಲ್ಲಿ ಅಖಿಲ ಭಾರತೀಯ ವಾಕ್ ಶ್ರವಣ ಸಂಸ್ಥೆ ಮೈಸೂರು, ಆದಿತ್ಯ ಟ್ರಸ್ಟ್ (ರಿ.) ನಕ್ರೆ, ಕಾರ್ಕಳ ಸಹಯೋಗದೊಂದಿಗೆ ಉಚಿತ ಶ್ರವಣ ದೋಷ ತಪಾಸಣೆ ಹಾಗೂ ಶ್ರವಣಯಂತ್ರ ವಿತರಣಾ ಶಿಬಿರ ಮೇ 6ರಂದು ಉಡುಪಿ ಗ್ರಾಮೀಣ ಬಂಟರ ಸಂಘದ ಸಭಾ ಭವನ, ಕುಂತಳನಗರ ಇಲ್ಲಿ ಜರಗಲಿದೆ.

ಫಲಾನುಭವಿಗಳು ಶಿಬಿರಕ್ಕೆ ಬರುವಾಗ ತರಬೇಕಾದ ದಾಖಲೆಗಳು : 1. ಇತ್ತೀಚಿನ ಭಾವಚಿತ್ರ 2 ಪ್ರತಿ 2. ಆಧಾರ್ ಕಾರ್ಡಿನ ನಕಲು 2ಪ್ರತಿ 3. ಬಿ. ಪಿ. ಎಲ್. ಕಾರ್ಡಿನ ನಕಲು 2ಪ್ರತಿ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 90084 44076 / 98457 81211