ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ವಿಶ್ವ ಭಾರತಿ ಕಾಪು ವತಿಯಿಂದ ಮೇ 14, 15 ಮತ್ತು 16ರಂದು ಕಾಪುವಿನಲ್ಲಿ ವಿಶ್ವಭಾರತಿ ಸ್ವದೇಶಿ ಮೇಳ

Posted On: 12-05-2022 07:46PM

ಕಾಪು : ವಿಶ್ವ ಭಾರತಿ ಕಾಪು ಅರ್ಪಿಸುವ ವಿಶ್ವಭಾರತಿ ಸ್ವದೇಶಿ ಮೇಳವು ಕಾಪು ಶ್ರೀ ಕಾಳಿಕಾಂಬಾ ದೇವಸ್ಥಾನದ ವಠಾರದಲ್ಲಿ ಮೇ 14, 15 ಮತ್ತು 16 ರಂದು ಜರಗಲಿದೆ. ಸಮಾರಂಭವನ್ನು ಪರಮಪೂಜ್ಯ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠಾಧೀಶ್ವರರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರು ಪಡುಕುತ್ಯಾರು ಉದ್ಘಾಟಿಸಲಿದ್ದಾರೆ.

ಸ್ವದೇಶಿ ವಸ್ತುಗಳ ಬಗ್ಗೆ ತಿಳುವಳಿಕೆ ಮೂಡಿಸುವ ನಿಟ್ಟಿನಲ್ಲಿ ಕರಕುಶಲತೆಗಳನ್ನು ಒಳಗೊಂಡಂತೆ ಸುಮಾರು 80ರಷ್ಟು ಮಳಿಗೆಗಳು ಈ ವಿಶ್ವಭಾರತಿ ಸ್ವದೇಶಿ ಮೇಳದಲ್ಲಿ ಇರಲಿದೆ. ಸಭಾ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ, ಸಾಂಸ್ಕೃತಿಕ ಕಾರ್ಯಕ್ರಮಗಳು, ಮಕ್ಕಳಿಂದ ಹಿರಿಯರವರೆಗೆ ಸ್ಪರ್ಧಾ ಕಾರ್ಯಕ್ರಮ, ಚಿತ್ರೋತ್ಸವ, ಸ್ಥಳೀಯ ಪ್ರತಿಭೆಗಳಿಂದ ಕಾರ್ಯಕ್ರಮಗಳು ನಡೆಯಲಿದೆಯೆಂದು ವಿಶ್ವಭಾರತಿ ಇದರ ಪ್ರಮುಖರಾದ ರಂಗಕರ್ಮಿ ಬಾಸುಮ ಕೊಡಗು ಕಾಪು ಪ್ರೆಸ್ ಕ್ಲಬ್ ನಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಮೇ 14, ಶನಿವಾರ ಪೂರ್ವಾಹ್ನ 10ರಿಂದ ಉದ್ಘಾಟನಾ ಸಮಾರಂಭ ಮತ್ತು ಪುನೀತ ನಮನ ಕಾರ್ಯಕ್ರಮ, ಮೂರು ತಿಂಗಳಿಂದ ಎರಡು ವರ್ಷದ ಮಕ್ಕಳಿಗೆ ಆರೋಗ್ಯವಂತ ಶಿಶು ಸ್ಪರ್ಧೆ ಎಳೆಯರ ಅಂಗಳ, ಮಧ್ಯಾಹ್ನ 2ರಿಂದ 5ರವರೆಗೆ ಮಕ್ಕಳಿಗಾಗಿ ಛದ್ಮವೇಷ ಸ್ಪರ್ಧೆ, ಜನಪದ/ದೇಶೀ ನೃತ್ಯ ಸ್ಪರ್ಧೆ, ಮೇ 15ರಂದು ಯುವಕ-ಯುವತಿಯರಿಗಾಗಿ ಪ್ರತ್ಯೇಕ ದೇಶೀ ನೃತ್ಯ ಸ್ಪರ್ಧೆ, ಮಧ್ಯಾಹ್ನ 2ರಿಂದ 5ರವರೆಗೆ ಆದರ್ಶ ದಂಪತಿ ಸ್ಪರ್ಧೆ, ರಾತ್ರಿ ಆದರ್ಶ ಕಲಾವಿದರು ಅಂಬಾಗಿಲು ಇವರಿಂದ ಕರ್ಣಾಂತರಂಗ, ಮೇ 16 ಸೋಮವಾರ ಬೆಳಿಗ್ಗೆ 10ರಿಂದ ತಾರೆಯರ ತೋಟದಲ್ಲಿ ಕನ್ನಡ ತುಳು ಚಿತ್ರರಂಗದ ತಾರೆಯರ ಸಂಗಮ ಮತ್ತು ಮುಖಾಮುಖಿ, ಮೇ 16 ಅಪರಾಹ್ನ 2ರಿಂದ ಮಹಿಳೆಯರಿಗಾಗಿ ಜನಪದ ಗೀತೆ ಸ್ಪರ್ಧೆ ನಾರೀ ಧ್ವನಿ, ರಾತ್ರಿ ಸ್ಥಳೀಯ ಕಲಾವಿದರಿಂದ ನೃತ್ಯ ವೈಭವ, ಪ್ರತಿದಿನ ಸಂಜೆ 6ಗಂಟೆಯಿಂದ ಅಂತರಾಷ್ಟ್ರೀಯ ಪ್ರಶಸ್ತಿ ವಿಜೇತ ಗಿರೀಶ್ ಕಾಸರವಳ್ಳಿ ಚಿತ್ರೋತ್ಸವ, ಸಮಾರಂಭದಲ್ಲಿ ಭಾಗವಹಿಸಿದವರಿಗೆ ಅದೃಷ್ಟ ಬಹುಮಾನದ ಅವಕಾಶವಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿಶ್ವಭಾರತಿ ಕಾಪು ಅಧ್ಯಕ್ಷರಾದ ಕಾಪು ಶ್ರೀಕಾಂತ್ ಬಿ. ಆಚಾರ್ಯ, ಸ್ವದೇಶಿ ಮೇಳದ ಸಂಚಾಲಕರಾದ ಎಲ್ಲೂರು ಆನಂದ ಕುಂದರ್ ಉಪಸ್ಥಿತರಿದ್ದರು.