ನಮ್ಮ ಹಿರಿಯರು ಅನಾದಿಕಾಲದಿಂದ ಆರಾಧಿಸಿಕೊಂಡು ಬಂದಿರುವ ಉಂಡಾರುವಿನ ಕಾರ್ನಿಕದ ಪರಮ ಪವಿತ್ರ ಸ್ಥಳ ಕಂಬೆರ್ಲ ಪೆರಿಯ ಕಲ ಭಗವಾನ್ ಶ್ರಿ ಬಬ್ಬುಸ್ವಾಮಿ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠೆಯು ಊರ ಪರವೂರ ಭಕ್ತಾದಿಗಳ ಸಹಕಾರದಿಂದ ಸರಳ ರೀತಿಯಲ್ಲಿ ಕಳೆದ ಬುಧವಾರ ಜರಗಿದ್ದು ಇದರ ಮುಂದುವರಿದ ಭಾಗವಾಗಿ ಪೆರಿಯಕಲದಲ್ಲಿ ನೆಲೆಯಾಗಿ ಭಕ್ತಾದಿಗಳಿಗೆ ಸದಾ ಅಭಯವನ್ನು ನೀಡುತ್ತಿರುವ ಸತ್ಯಗಳಿಗೆ ಪುನರ್ ಪ್ರತಿಷ್ಠೆಯ ಸಲುವಾಗಿ ಸಂದಬೇಕಾಗಿರುವ 3 ಬೋಗ ಸೇವೆಯಲ್ಲಿ 2 ಬೋಗ ಸೇವೆ (ಪಂಚಕಜ್ಜಾಯ ಸೇವೆ) ಯನ್ನು ಗ್ರಾಮದ ಭಕ್ತಾದಿಗಳು ಹತ್ತು ಸಮಸ್ತರೊಂದಿಗೆ ಸಲ್ಲಿಸಿದ್ದು 3ನೆಯ ಬೋಗ ಗಡಿಹಾರ ಸೇವೆ (ರಕ್ತಾಹಾರ ಸೇವೆ)ಯನ್ನು ಇಂದು ಪೆರಿಯಕಲದ ಸತ್ಯಗಳ ದರ್ಶನದೊಂದಿಗೆ ಗ್ರಾಮದ ಭಕ್ತಾದಿಗಳ ಸಹಕಾರದಿಂದ ಸಮರ್ಪಿಸಲಾಯಿತು. ಈ ಎಲ್ಲಾ ಕಾರ್ಯಕ್ರಮಗಳನ್ನು ಅತ್ಯಂತ ಸರಳ ರೀತಿಯಲ್ಲಿ ಆಚರಿಸಲಾಯಿತು.
ಈ ಪುಣ್ಯ ಕಾರ್ಯಕ್ಕೆ ಕೈ ಜೋಡಿಸಿ ತನು ಮನ ಧನದ ಸಹಕಾರ ನೀಡಿದ ಎಲ್ಲರಿಗೂ ಆಡಳಿತ ಮಂಡಳಿಯು ಧನ್ಯವಾದಗಳನ್ನು ಸಲ್ಲಿಸುತ್ತದೆ.