ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಬೆಳಪು : ಸಂಕ್ರಮಣ ಪೂಜೆಯ ಸಂದರ್ಭದಲ್ಲಿ ಕಂಡುಬಂತು ನೀರಿನಲ್ಲಿ ಶಿವನ ಆಕೃತಿ

Posted On: 16-06-2020 08:39AM

ಬೆಳಪು-ಪಣಿಯೂರು ಗ್ರಾಮದ ಮಲಂಗೋಲಿ ಪರಿಸರದಲ್ಲಿ ಇರುವ ಉಮಾಮಹೇಶ್ವರ ದೇವಸ್ಥಾನದ ಕೆರೆಯಲ್ಲಿ ತಾ/14.06.2020 ರ ಮಿಥುನ ಸಂಕ್ರಮಣದ ಪೂಜೆಯ ಸಂದರ್ಭದಲ್ಲಿ ಶಿವನ ಆಕೃತಿಯೊಂದು ಕಂಡುಬಂದಿದೆ. ಶ್ರೀ ಕ್ಷೇತ್ರವು ಬೆಳಪು-ಪಣಿಯೂರು ಗ್ರಾಮಕ್ಕೆ ಸಂಬಂಧಿಸಿದ್ದು, ಅನಾದಿ ಕಾಲದಲ್ಲಿ ಇಲ್ಲಿ ಗ್ರಾಮಸ್ಥರು ಸೇರಿ ಪೂಜಾವಿಧಿಗಳು ನಡೆಯುತ್ತಿದ್ದು ಕ್ಷೇತ್ರದಲ್ಲಿ ಶ್ರೀ ಉಮಾಮಹೇಶ್ವರ ದೇವರು, ತುಳುನಾಡಿನ ಮೂಲ ದೇವರಾದ ಬೆರ್ಮರು, ಹಾಗೂ ಲೆಕ್ಕೆಸಿರಿ ನಂದಿಗೋಣ ಸೇರಿ ಪಂಚ ದೈವಗಳ ಸಾನ್ನಿಧ್ಯವಿದೆ. ಹಲವಾರು ವರ್ಷಗಳಿಂದ ಅಜೀರ್ಣಾವಸ್ಥೆಯಲ್ಲಿ ಇರುವಂತಹ ಈ ದೇವಸ್ಥಾನದ ಜೀರ್ಣೋದ್ಧಾರ ಬಗ್ಗೆ ಅನೇಕ ವರ್ಷಗಳಿಂದ ಗ್ರಾಮಸ್ಥರು ಪ್ರಯತ್ನ ಪಡುತ್ತಿದ್ದರು, ಇನ್ನೂ ಕಾಲ ಕೂಡಿ ಬರಲಿಲ್ಲ ಎಂದು ಬೇಸರದಲ್ಲಿರುವ ಗ್ರಾಮಸ್ಥರು. ನೀರಿನಲ್ಲಿ ಕಾಣಿಸಿರುವ ಆಕೃತಿ ದೇವರ ಸನ್ನೆಯಂತೆ ಎಂದು ತಿಳಿದಿದ್ದಾರೆ. ಬೆಳಪು-ಪಣಿಯೂರು ಗ್ರಾಮದ ಪಂಚಾಯಿತಿ ಅಧ್ಯಕ್ಷರು ಶ್ರೀ ಡಾ. ದೇವಿಪ್ರಸಾದ್ ಶೆಟ್ಟಿಯವರು ಹಾಗೂ ಗ್ರಾಮಸ್ಥರ ಉಪಸ್ಥಿತಿಯಲ್ಲಿ ಸಮಗ್ರವಾಗಿ ಜೀರ್ಣೋದ್ಧಾರದ ಬಗ್ಗೆ ಚಿಂತನೆ ನಡೆದಿದೆ.