ಉಡುಪಿ : ಇತ್ತೀಚೆಗೆ ಮಿಯಾರು ಬೋಕ೯ಟ್ಟೆ ಬಳಿ ನಡೆದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಜೀವನ್ಮರಣ ಹೋರಾಟದಲ್ಲಿರುವ ಗಬ್ಬದನ ವನ್ನು ರಕ್ಷಿಸಿ ಚಿಕಿತ್ಸೆ ನೀಡುತ್ತಿರುವ ಸ್ಥಳೀಯರಾದ ರಾಜೇಶ್ ಶೆಟ್ಟಿ ಕುಟುಂಬ ಕೊರೋನಾ ವಾರಿಯರ್ಸ್ ಉಡುಪಿ ತoಡ ತಯಾರಿಸಿದ 21 ಭಾಷೆಯ ಅಡಿಯೋ ಕೇಳಿ ಸಹಾಯಕ್ಕೆ ಮನವಿ ಮಾಡಿರುತ್ತಾರೆ ಈ ಸಂದಭ೯ದಲ್ಲಿ ಮಂಗಳೂರಿನ ದೂರಸಂಪಕ೯ ಇಲಾಖೆಯ ಗೋಪಾಲ ಕೃಷ್ಣ ಪ್ರಭು ಜಾನುವಾರಿಗೆ ಬೇಕಾದ ಅಗತ್ಯ ಆಹಾರ ವಸ್ತುಗಳನ್ನು ಅದೇ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿದೇ೯ಶಕ ಡಾII ಸುಬ್ರಮಣ್ಯ ಪ್ರಸಾದ್ ರವರ ಸಹಕಾರ ಚಿಕಿತ್ಸೆಗೆ ಸಹಕರಿಸಿದ್ದಾರೆ.ಮಾಜಿ ಸಹಾಯಕ ತಹಶೀಲ್ದಾರ್ ಮಾತ೯ಮ್ಮ ರವರ ತೋಟದ ಹಟ್ಟಿಯಲ್ಲಿ ಈ ದನದ ಶುಶ್ರೂಷೆ ನಡೆಯುತ್ತಿದೆ.ಈ ಕಾಯ೯ಕ್ಕೆ ಪ್ರಸಾದ್ ಶೆಟ್ಟಿ, ರಮೇಶ್, ಸಂದೀಪ್ ಹೆಗ್ಡೆ ಸಹಕರಿಸುತ್ತಿದ್ದಾರೆ. ಇದೀಗ ದನದ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತಿದೆ. ಕರೋನಾ ವಾರಿಯರ್ಸ್ ತಂಡದ ದೀಪಕ್, ರಾಘವೇಂದ್ರ ಕವಾ೯ಲು ಸಹಕರಿಸಿದರು. ಸಂಕಷ್ಟದಲ್ಲಿರುವ ಜಾನುವಾರಿಗೆ ಮಿಡಿದ ಈ ಯುವಕರ ಕಾಯ೯ಕ್ಕೆ ವ್ಯಾಪಕ ಪ್ರಶoಸೆ ವ್ಯಕ್ತವಾಗಿದೆ.