ಶಂಕರಪುರ.28, ಜೂನ್ : ರೋಟರಿ ಶಂಕರಪುರದ ಪದಪ್ರಧಾನ ಸಮಾರಂಭವು ರೋಟರಿ ಶತಾಬ್ದಿ ಭವನದಲ್ಲಿ ಜರುಗಿತು.ಪದಪ್ರಧಾನ ಅಧಿಕಾರಿಯಾದ ಎಸ್ ಸದಾನಂದ ಚಾತ್ರ ಇವರು ನಿರ್ಗಮನ ಅಧ್ಯಕ್ಷರು ಆದ ಸಂದೀಪ್ ಬಂಗೇರ ಇವರಿಂದ ನೂತನ ಅಧ್ಯಕ್ಷರು ಆದ ವಿಕ್ಟರ್ ಮಾರ್ಟಿಸ್ ಇವರಿಗೆ ಅಧಿಕಾರ ಹಸ್ತಾಂತರ ಮಾಡಿದರು.. ಈ ಸಂದರ್ಭದಲ್ಲಿ ವೈದ್ಯಕೀಯ ವೃತ್ತಿಯಲ್ಲಿ ಮತ್ತು ಧ್ವನಿ ಮತ್ತು ಬೆಳಕು ಉದ್ಯಮದಲ್ಲಿ ಸುವರ್ಣ ಮಹೋತ್ಸವವನ್ನು ಆಚರಿಸಿದ ಹಿರಿಯ ರೋಟರಿ ಸದಸ್ಯರುಗಳಾದ ಡಾ ಎಡ್ವರ್ಡ್ ಲೋಬೊ ಮತ್ತು ಆಂಟನಿ ಡೇಸಾ ಇವರನ್ನು ಮುಖ್ಯ ಅತಿಥಿಗಳಾದ ರೋಟರಿ ಜಿಲ್ಲೆ 3180..ಯ ಮಾಜಿ ಜಿಲ್ಲಾ ಸಭಾಪತಿಯಾದ ಎಸ್ ಸದಾನಂದ ಚಾತ್ರ, ಸಹಾಯಕ ಗವರ್ನರ್ ನವೀನ್ ಅಮೀನ್, ವಲಯ ಸೇನಾನಿ ಸುರೇಶ್ ರಾವ್ ಅವರ ಉಪಸ್ಥಿತಿಯಲ್ಲಿ ಗುರುತಿಸಿ ಗೌರವಾದರಗಳಿಂದ ಸಮ್ಮಾನಿಸಲಾಯಿತು.. ಈ ಸಂದರ್ಭದಲ್ಲಿ ರೋಟರಿ ಶಂಕರಪುರ ನೂತನ ಕಾರ್ಯದರ್ಶಿ ಜೆರಾಮ್ ರೋಡ್ರಿಗೆಸ್, ಸಂದೀಪ್ ಬಂಗೇರ ಮತ್ತು ಜಾನ್ ರೋಡ್ರಿಗೆಸ್ ಫ್ರಾನ್ಸಿಸ್ ಡೇಸಾ, ಅನಿಲ್ ಡೇಸಾ ಉಪಸ್ಥಿತರಿದ್ದರು..