ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಜೆಸಿಐ ಶಂಕರಪುರ ಜಾಸ್ಮಿನ್ ವತಿಯಿಂದ ಆಶಾಕಾರ್ಯಕರ್ತೆಯರಿಗೆ ಸಮ್ಮಾನ

Posted On: 30-06-2020 11:05PM

ಕೊರೊನ ಎಂಬ ಮಹಾಮಾರಿ ಇಡೀ ದೇಶವನ್ನೇ ನಲುಗಿಸಿ ಅನೇಕ ಸಾವು ನೋವುಗಳಿಗೆ ಸಾಕ್ಷಿ ಆಗಿದೆ. ಮನುಕುಲದ ಇತಿಹಾಸದಲ್ಲಿ ಕಠಿಣ ಪರಿಸ್ಥಿತಿಯ ಈ ಸಮಯದಲ್ಲಿ ಮಾತನಾಡಲು ಭಯಪಡುವ ಸಮಯದಲ್ಲಿ ನಾವಿದ್ದೇವೆ. ಈಗಲೂ ಕೊರೊನ ಮಹಾಮಾರಿಯ ಅಟ್ಟಹಾಸ ಮುಂದುವರಿಯುತ್ತಾ ಇದೆ. ಈ ಕಠಿಣ ಪರಿಸ್ಥಿತಿಯಲ್ಲಿ ಜನರ ನೆರವಿಗೆ ಬಂದು ತಮ್ಮ ಜೀವವನ್ನು ಪಣಕಿಟ್ಟು ಈಗಲೂ ಜನಸೇವೆ ಮಾಡುತ್ತಿರುವವರು ನಮ್ಮ ಆಶಾ ಕಾರ್ಯಕರ್ತರು. ನಿನ್ನೆ ಜೆಸಿಐ ಶಂಕರಪುರ ಜಾಸ್ಮಿನ್ ನ ಜೆಸಿ ಭವನದಲ್ಲಿ ಕುರ್ಕಾಲ್ ಗ್ರಾಮ ಮತ್ತು ಇನ್ನಂಜೆ ಪಾಂಗಾಳ ಗ್ರಾಮದ ಆಶಾ ಕಾರ್ಯಕರ್ತರು ಆದ ಶ್ರೀಮತಿ ಗಾಯತ್ರಿ, ಕಲಾ, ಸುಷ್ಮಾ ಮತ್ತು ರೇಖಾ ಶೆಟ್ಟಿ, ಪುಷ್ಪ ಶೆಟ್ಟಿ, ಸುಜಾತಾ ಭಂಡಾರಿ, ಉಷಾ ಭಟ್ ಇವರನ್ನು ಸಮ್ಮಾನಿಸಲಾಯಿತು. ಜೆಸಿಐ ಶಂಕರಪುರ ಜಾಸ್ಮಿನ್ ವತಿಯಿಂದ ಆಶಾಕಾರ್ಯಕರ್ತೆಯರನ್ನು ಗೌರವಿಸಿ, ಪ್ರಶಂಸೆ ವ್ಯಕ್ತಪಡಿಸಿದರು.