ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪು : ಬಜರಂಗದಳದ ಸೇವಾ ಸಪ್ತಾಹ ಅಂಗವಾಗಿ ಶಿರ್ವ ಮತ್ತು ಪಾಂಗಾಳ ಘಟಕಗಳಿಂದ ಹಿಂದೂ ರುಧ್ರಭೂಮಿಯ ಸ್ವಚ್ಛತಾ ಕಾರ್ಯ

Posted On: 19-03-2023 02:45PM

ಕಾಪು : ಬಜರಂಗದಳದ ಸೇವಾ ಸಪ್ತಾಹ ಅಂಗವಾಗಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಮಾತೃಶಕ್ತಿ ದುರ್ಗಾವಾಹಿನಿ ಶಿರ್ವ ವಿಷ್ಣುಮೂರ್ತಿ ಘಟಕ ಮತ್ತು ಪಾಂಗಾಳ ಘಟಕ ವತಿಯಿಂದ ಸಾಮಾಜಿಕ ಕಾರ್ಯಗಳು ಇಂದು ಜರಗಿತು.

ಶಿರ್ವ ವಿಷ್ಣುಮೂರ್ತಿ ಘಟಕ ವತಿಯಿಂದ ಶಿರ್ವ ಹಿಂದೂ ರುದ್ರಭೂಮಿ ಮತ್ತು ಪಾಂಗಾಳ ಘಟಕ ವತಿಯಿಂದ ಪಾಂಗಾಳ ಗಾಂಧಿನಗರದ ಹಿಂದೂ ರುಧ್ರಭೂಮಿಯ ಸ್ವಚ್ಛತಾ ಕಾರ್ಯ ನಡೆಯಿತು.