ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಹಲ್ಲು,ಉಗುರು ಮತ್ತು ಕಾಲಿನಿಂದ ತೆಂಗಿನಕಾಯಿ ಸಿಪ್ಪೆ ಸುಲಿದು ದಾಖಲೆ ಮಾಡಿದ ರಾಜೇಶ್ ಪ್ರಭು

Posted On: 04-07-2020 10:32PM

ಸಮಾಜದಲ್ಲಿ ಹಲವಾರು ಜನ ವಿವಿಧ ಸಾಧಕರಿದ್ದಾರೆ. ಅದರಲ್ಲಿಯೂ "ಆ ಸಾಧನೆಯಿಂದಲೆ ಹೆಸರು ವಾಸಿಯಾಗುವವರು ಬಹಳ ಕಡಿಮೆ ಮಂದಿ ಹೀಗಾಗಿ ಸಾಧನೆಗೆ ಸರಿಯಾದ ಮಾನ್ಯತೆ ದೊರೆಯದಿದ್ದರೆ ಅದು ಅಲ್ಲಿಯೇ ಕಮರಿ ಹೋಗಬಹುದು. ಆದರೆ ಕಾಪು ತಾಲೂಕಿನ ಶಿವ೯ ಸಮೀಪ ಪೆನಾ೯ಲಿ ನ.ರಾಜೇಶ್ ಪ್ರಭು ಎಂಬುವವರು ತನ್ನ ವಿಶೇಷ ಸಾಧನೆಯಿಂದ ಇಂದು ವಿಶ್ವ ದಾಖಲೆ ಮಾಡುವತ್ತ ದಾಪುಗಾಲು ಹಾಕುತ್ತಿದ್ದಾರೆ. ಹಲ್ಲು 30 ಸೆಕೆಂಡ್, ಕಾಲು 46 ಸೆ. ಉಗುರು 33 ಸೆ.. ಇದು ಅವರು ವಲ್ಡ್ ಇಂಡಿಯಾ ರೆಕಾಡ್೯ಗೆ ತೆಂಗಿನಕಾಯಿ ಸುಲಿಯುದಕ್ಕೆ ವ್ಯಯಿಸಿದ ಸಮಯ. ನಿಮಗೆ ಆಶ್ಚಯ೯ವಾಗಬಹುದು ತೆಂಗಿನಕಾಯಿಯನ್ನು ಕತ್ತಿಯಿಂದ ಅಥವಾ ಇತರ ಸಾಧನದಿಂದ ಸುಲಿಯಲು ಕಷ್ಟ ಪಡುವ ನಾವು ಕೇವಲ ಹಲ್ಲು, ಉಗುರು' ಕಾಲಿನಿಂದ ಸಿಪ್ಪೆ ಸುಲಿಯುವುದು ದೂರದ ಮಾತು ಆದರೆ ರಾಜೇಶ್ ಪ್ರಭುರವರು ಇದನ್ನು ಅತ್ಯಂತ ಚಮತ್ಕಾರದಲ್ಲಿ ಮುಗಿಸುತ್ತಾರೆ. ಮಹಾರಾಷ್ಟ್ರದ ನಾಸಿಕ್ ನಲ್ಲಿ 28 ಇಂಚು ಸುತ್ತಳತೆಯ 4.477 ಕೆ.ಜಿ ತೂಕದ ತೆಂಗಿನಕಾಯಿಯನ್ನು ಉಗುರು ಕಾಲು, ಮತ್ತು ಹಲ್ಲಿನಿಂದ ಸುಲಿದು ದಾಖಲೆ ಮಾಡಿದ್ದಾರೆ.ಈಗಾಗಲೇ ವಿವಿಧ ಕಡೆಗಳಲ್ಲಿ ಈ ಪ್ರದಶ೯ನವನ್ನು ನೀಡಿ ಎಲ್ಲರಿಂದಲೂ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಅದರಲ್ಲಿಯೂ ಭಾರತದಲ್ಲಿ ಬರೇ ಕಾಲಿನಿಂದ ತೆಂಗಿನಕಾಯಿ ಸುಲಿಯುವವರು ಬಹಳ ಕಡಿಮೆ ಆದರೆ ಇವರು 3 ವಿಭಾಗದಲ್ಲಿಯೂ ಈ ಸಾಧನೆ ಮಾಡಿದ ಮೊದಲ ವ್ಯಕ್ತಿಯಾಗಿದ್ದಾರೆ.ಈಗಾಗಲೇ ಲಿಮ್ಕಾ ದಾಖಲೆ ಮಾಡಿರುವ ಇವರು ಗಿನ್ನೆಸ್ ದಾಖಲೆಗಾಗಿ ಪ್ರಯತ್ನ ಮಾಡುತ್ತಿದ್ದಾರೆ. 1997 ರಲ್ಲಿ ಪ್ರಾರಂಭವಾದ ಈ ಹವ್ಯಾಸ ಅಥವಾ ದಾಖಲೆಯ ಪಯಣ ಇಂದಿನವರೆಗೆ ಸಾಗಿದೆ. ಈ ಬಗ್ಗೆ ಅವರೊಂದಿಗೆ ಮಾತನಾಡಿದಾಗ ಮೊದಲು ಬಹಳ ಕಷ್ಟವಾಗುತ್ತಿತ್ತು ಒಂದು ತೆಂಗಿನಕಾಯಿಯ ಸಿಪ್ಪೆ ಸುಲಿಯಲು ಹಲ್ಲು, ಉಗುರು' ಕಾಲಿನಿಂದ ಬಹಳ ಸಮಯ ತೆಗೆದುಕೊಳ್ಳುತ್ತಿದ್ದೆ ಆದರೆ ಇಂದು ಕೆಲವೇ ಸೆಕೆಂಡುಗಳಲ್ಲಿ ಇದನ್ನು ಮಾಡಲು ಸಾಧ್ಯವಾಗಿದೆ.ಮಂಗಗಳು ತಮ್ಮ ಬೆರಳನ್ನು ಉಪಯೋಗಿಸಿ ಅಥವಾ ಹಲ್ಲಿ ನಿಂದ ಸಿಪ್ಪೆ ಸುಲಿಯುದನ್ನು ಗಮನಿಸಿ ಯಾಕೆ ನಾನು ಪ್ರಯತ್ನ ಮಾಡಬಾರದು ಎಂದು ಇದನ್ನು ಪ್ರಾರಂಭಿಸಿದೆ.ಮೊದಲಿನಿಂದಲೂ ಸಾಹಸ ಕಲೆಯಲ್ಲಿ ಆಸಕ್ತಿ ಹೊಂದಿದ ಕಾರಣ ನನಗೆ ಇದನ್ನು ಮಾಡಲು ಸಾದ್ಯವಾಯಿತು ಎಂದು ಅವರು ಹೇಳುತ್ತಾರೆ. ಇದಲ್ಲದೆ 2 ಕೈಯಿಂದಲೂ ಕನ್ನಡಿ ಬರಹವನ್ನು ಬರೆಯಬಲ್ಲರು ಇವರು ಸಾಮಾನ್ಯ ಹಳ್ಳಿ ಪ್ರದೇಶದಲ್ಲಿ ಬೆಳೆದರೂ ಸ್ಥಳೀಯ ಜನರ ಪ್ರೇರಣೆಯಿಂದ ಈ ಸಾಧನೆ ಸಾಧ್ಯವಾಯಿತು ಎನ್ನುತ್ತಾರೆ. ಮಂಗಳೂರಿನ ಖಾಸಗಿ ಟ್ರಾವೆಲ್ಸ್ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಇವರು ಇದನ್ನು ಹವ್ಯಾಸವಾಗಿ ಮಾಡಿದ್ದಾರೆ. ಮನೆಯಲ್ಲಿ ತೆಂಗಿನಕಾಯಿ ಸುಲಿಯಲು ಕತ್ತಿ ಸಿಗದಿದ್ದಾಗ ಅವರು ಬರೇ ಕೈಯಿಂದ ಸಿಪ್ಪೆ ಸುಲಿದು ಮನೆಯವರಿಗೆ ಸಹಾಯ ಮಾಡುತ್ತಾರೆ. 60.ಕೆ.ಜಿ ಭಾರವನ್ನು ಹಲ್ಲಿನಿಂದ ಎತ್ತುವುದು ಮುಂತಾದ ಸಾಹಸವನ್ನು ಅವರು ಮಾಡಬಲ್ಲರು ಈಗಾಗಲೇ ವಲ್ಡ್ ರೆಕಾಡ್ ೯ ಇಂಡಿಯಾಕ್ಕೆ ಸೇಪ೯ಡೆಯಾದ ಇವರು ಪ್ರವಾಸ ಹೋದಾಗ ಮನರಂಜನೆಗಾಗಿ ಈ ರೀತಿಯ ಪ್ರದಶ೯ನ ಮಾಡುತ್ತಾರೆ.ಗಿನ್ನೆಸ್ ದಾಖಲೆಗಾಗಿ ಲಕ್ಷಾಂತರ ರೂ ವ್ಯಯಿಸಬೇಕಾಗಿದೆ ಅಷ್ಟೋoದು ಹಣವನ್ನು ಹೊಂದಾಣಿಕೆ ಮಾಡುವುದು ಕಷ್ಠವಾಗಿದೆ ದಾನಿಗಳು ಮುಂದೆ ಬಂದರೆ ಈ ಸಾಧನೆ ಮಾಡುವಾಗಿ ಹೇಳಿದ್ದಾರೆ.ಈ ರೀತಿಯ ಸಾಧನೆಗೆ ಹಳ್ಳಿಯ ಪರಿಸರ ಸಹಾಯಕ ವಾಗಿದೆ ನಗರದಲ್ಲಿ ಇದು ಸಾಧ್ಯವಾಗುತ್ತಿರಲಿಲ್ಲ ವಾತಾವರಣ ಮತ್ತು ಮಂಗಗಳು ನನಗೆ ಪ್ರೇರಣೆ ಎನ್ನುತ್ತಾರೆ. ಅವರು ಈ ಸಾಧನೆ ಬೇಗನೆ ಮಾಡಲಿ ಎಂಬ ಶುಭ ಹಾರೈಕೆ ನಮ್ಮದಾಗಿದೆ. ಲೇಖನ: ರಾಘವೇಂದ್ರ ಪ್ರಭು , ಕವಾ೯ಲು