ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪುವಿನ ದಕ್ಷ, ಪ್ರಾಮಾಣಿಕ, ಜನಸ್ನೇಹಿ ಸರ್ಕಲ್ ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್

Posted On: 05-07-2020 02:05PM

ಮಹೇಶ್ ಪ್ರಸಾದ್ ಪ್ರಸ್ತುತ ನಮ್ಮ ಕಾಪು ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರು, ಇವರು ಈ ಹಿಂದೆ ಹಿರಿಯಡ್ಕ ,ಕೋಟ,ಬಂಟ್ವಾಳದಲ್ಲಿ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದ್ದರು .ಹಿರಿಯಡ್ಕ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿ ಎಂದೇ ಹೆಸರುವಾಸಿಯಾದವರು .ತದನಂತರ ಕೋಟ ಠಾಣೆಗೆ ವರ್ಗಾವಣೆಯಾದ ಬಳಿಕ ಅಲ್ಲಿ ನಡೆಯುತ್ತಿರುವ ಮಟ್ಕಾ ,ಇಸ್ಪೀಟ್,ಇನ್ನಿತರ ಕಳ್ಳ ದಂಧೆಗಳಿಗೆ ಬ್ರೇಕ್ ಹಾಕಿದವರು ಇದೇ ಮಹೇಶ್ ಪ್ರಸಾದ್ . ಯಾವುದೇ ರಾಜಕೀಯ ಶಿಫಾರಸುಗಳಿಗೆ ಬೆಲೆ ಕೊಡುತ್ತಿರಲಿಲ್ಲ .ಸಾಮಾನ್ಯ ಜನತೆಗೆ ಠಾಣೆಗೆ ಬರಲು ಮುಕ್ತ ಅವಕಾಶ ನೀಡುತ್ತಿದ್ದರು .ತಪ್ಪು ಮಾಡಿದರೆ ಮೊದಲು ಅವರ ಮೇಲೆ ಎಫ್. ಐ.ಆರ್ ಆಗುತ್ತಿತ್ತು .ದಿನದ ಇಪ್ಪತ್ತನಾಲ್ಕು ಗಂಟೆ ಕರ್ತವ್ಯ ನಿರ್ವಹಿಸಿದ ಹೆಗ್ಗಳಿಕೆ ಇವರಿಗಿದೆ .ಪೊಲೀಸ್ ಪೇದೆಗಳು ಇವರ ವರ್ಗಾವಣೆ ಯಾವಾಗ ಆಗುತ್ತದೆ ಎಂದು ಕಾಯುತ್ತಿದ್ದರು .ಕೋಟದಲ್ಲಿ ಇವರು ಇರುವಾಗ ಪುಂಡ ಪೋಕರಿಗಳ ಹೆಡೆಮುರಿ ಕಟ್ಟಿ ರೌಡಿಶೀಟ್ ಓಪನ್ ಮಾಡಿದ ಖ್ಯಾತಿ ಇವರಿಗಿದೆ.ಕೋಟದ ಜನತೆಗೆ ಪೊಲೀಸ್ ಹೇಗಿರಬೇಕೆಂದು ತೋರಿಸಿಕೊಟ್ಟವರು ಇವರು .ಇಂದಿಗೂ ಕೂಡ ಕೋಟದ ವ್ಯಾಪ್ತಿಯಲ್ಲಿ ಅವರಿಗೆ ವಿಶೇಷ ಗೌರವವಿದೆ. ವಿಶೇಷ ತನಿಖಾಧಿಕಾರಿಯಾಗಿ ಮಹೇಶ್ ಪ್ರಸಾದ್ :ಮಹೇಶ್ ಪ್ರಸಾದ್ ಇವರ ಕರ್ತವ್ಯ ಪರತೆ ಹಾಗೂ ಚುರುಕುತನವನ್ನು ನೋಡಿ ಅಂದಿನ ಎಸ್ಪಿ ಅವರು ಕೋಟ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂದರ್ಭದಲ್ಲಿ ಮಹೇಶ್ ಪ್ರಸಾದರ ವಿಶೇಷ ತಂಡ ರಚನೆ ಮಾಡಿ ಭೂಗತ ಜಗತ್ತಿನ ಪಾತಕಿಯಾದ ಕೊರಗ ಶೆಟ್ಟಿ ಇವರ ಸಹಚರರ ದಸ್ತಗಿರಿ ಮಾಡಿದ್ದರು. ಆರ್.ಟಿ.ಐ ಕಾರ್ಯಕರ್ತ ವಂಡಾರು ವಾಸುದೇವ ಅಡಿಗ ಕೊಲೆ ಪ್ರಕರಣದ ವಿಶೇಷ ತನಿಖಾಧಿಕಾರಿ : ಕೋಟದಿಂದ ಮಹೇಶ್ ಪ್ರಸಾದ್ ಇವರು ಬಂಟ್ವಾಳಕ್ಕೆ ವರ್ಗಾವಣೆಯಾದ ನಂತರ ಆರ್ ಟಿ ಐ ಕಾರ್ಯಕರ್ತ ವಂಡಾರು ವಾಸುದೇವ ಅಡಿಗರ ಕೊಲೆಯಾದ ತಕ್ಷಣ ಆ ಗಂಭೀರ ಪ್ರಕರಣಕ್ಕೆ ವಿಶೇಷ ತನಿಖಾಧಿಕಾರಿಯಾಗಿ ಬಂದವರು ಇದೇ ಮಹೇಶ್ ಪ್ರಸಾದ್ .ಅತ್ಯಂತ ಕ್ಲಿಷ್ಟಕರವಾದ ಕೊಲೆ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಿ ಜನಮನ್ನಣೆ ಗೊಂಡವರು . ಕೋಟದ ಅವಳಿ ಕೊಲೆಯ ವಿಶೇಷ ತನಿಖಾಧಿಕಾರಿ ಕಳೆದ ಒಂದು ವರ್ಷದ ಹಿಂದೆ ಕೋಟದಲ್ಲಿ ಡಬ್ಬಲ್ ಮರ್ಡರ್ ಆಗಿ ಆರೋಪಿಗಳ ಪತ್ತೆ ಹಚ್ಚುವಂತೆ ಕೋಟದಲ್ಲಿ ಪ್ರತಿಭಟನೆ ನಡೆದಾಗ ಆ ಪ್ರಕರಣಕ್ಕೆ ವಿಶೇಷ ತನಿಖಾಧಿಕಾರಿಯಾಗಿ ಬಂದವರೇ ಇದೇ ಮಹೇಶ್ ಪ್ರಸಾದ್ .ಡಬ್ಬಲ್ ಮರ್ಡರ್ ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ ಖ್ಯಾತಿ ಇವರಿಗಿದೆ . ಶಿರ್ವದ ಫಾದರ್ ಮಹೇಶ್ ಅವರ ಪ್ರಕರಣದ ವಿಶೇಷ ತನಿಖಾಧಿಕಾರಿ : ಶಿರ್ವ ಚರ್ಚಿನ ಫಾದರ್ ಮಹೇಶ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಿರ್ವದಲ್ಲಿ ಅತಿ ದೊಡ್ಡ ಪ್ರತಿಭಟನೆ ನಡೆದಿತ್ತು .ಅಂದಿನ ಎಸ್ಪಿ ಅವರಿಗೆ ನೆನಪಾಗಿದ್ದು ಇದೇ ಮಹೇಶ್ ಪ್ರಸಾದ್ .ಆ ಪ್ರಕರಣದ ವಿಶೇಷ ತನಿಖಾಧಿಕಾರಿಯಾಗಿ ಸ್ವತಃ ಆರೋಪಿಯ ಮೇಲೆ ಎಫ್ಐಆರ್ ದಾಖಲು ಮಾಡಿ ಆರೋಪಿಯನ್ನು ಬಂಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿ ದವರು . ಮಣಿಪಾಲದಲ್ಲಿ ಪರಪ್ಪ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಣೆ ಅಣ್ಣಾಮಲೈ ಅವರು ಎಸ್ಪಿ ಆಗಿರುವ ಸಂದರ್ಭದಲ್ಲಿ ಮಣಿಪಾಲದಲ್ಲಿ ವೃತ್ತ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಣೆ ಮಾಡಿದ್ದರು .ಮಣಿಪಾಲದ ವಿದ್ಯಾರ್ಥಿಗಳ ಫ್ಲ್ಯಾಟ್ ಒಂದರಲ್ಲಿ ಗಾಂಜಾ ಪ್ರಕರಣವನ್ನು ಪತ್ತೆ ಹಚ್ಚಿ ಹೆಸರುವಾಸಿಯಾಗಿದ್ದರು ಪುತ್ತೂರಿನಲ್ಲಿ ವೃತ್ತ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಣೆ : ಕಾಪು ಠಾಣೆಗೆ ವೃತ್ತ ನಿರೀಕ್ಷಕರಾಗಿ ಬರುವುದಕ್ಕಿಂತ ಮುಂಚೆ ಇವರು ಪುತ್ತೂರು ನಗರ ಠಾಣೆಯಲ್ಲಿ ವೃತ್ತ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು .ಮೂರು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ ಪುತ್ತೂರಿನಲ್ಲಿ ಪ್ರಾಮಾಣಿಕ ,ದಕ್ಷ, ಜನಸ್ನೇಹಿ ಪೊಲೀಸ್ ಎಂಬ ಹೆಸರು ಗಳಿಸಿದವರು .ಪೂರ್ಣ ಪುತ್ತೂರಿಗೆ ಮುಖ್ಯ ಮುಖ್ಯ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾಗಳನ್ನು ಸಾರ್ವಜನಿಕರ ದೇಣಿಗೆಯಲ್ಲಿ ಅಳವಡಿಸಿ ಅದರ ಕಂಟ್ರೋಲ್ ರೂಮನ್ನು ಠಾಣೆಯಲ್ಲಿ ಮಾಡಿಕೊಟ್ಟು ರಾಜ್ಯದಲ್ಲೇ ಪ್ರಪ್ರಥಮ ಸಿಸಿ ಕೆಮರಾ ಅಳವಡಿಕೆ ಠಾಣೆ ಎಂದು ಹೆಸರುವಾಸಿ ಗಳಿಸಿದರು . ಮಹೇಶ್ ಪ್ರಸಾದರ ಹೆಸರಿಗೆ ಹಾಗೂ ಹುಟ್ಟಿಗೆ ವಿಶೇಷ ಅರ್ಥವಿದೆ : 1978 ನೇ ಇಸವಿಯಲ್ಲಿ ಪುತ್ತೂರಿನಲ್ಲಿ ಮಹೇಶ್ ಪ್ರಸಾದ್ ಇವರ ತಂದೆ ಕಾನ್ ಸ್ಟೆಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು .ಅವರ ತಂದೆ ಮೇಲಧಿಕಾರಿಗೆ ಸೆಲ್ಯೂಟ್ ಮೂಲಕ ಗೌರವ ಸೂಚಿಸುವಾಗ ಮಹೇಶ್ ಅವರ ತಂದೆಯ ಮನಸ್ಸಿನಲ್ಲಿ ತನಗೆ ಗಂಡು ಮಗುವೇ ಹುಟ್ಟಬೇಕು ,ತನ್ನ ಮಗ ಓರ್ವ ಪೊಲೀಸ್ ಅಧಿಕಾರಿಯಾಗಬೇಕು ಎಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರಲ್ಲಿ ಪ್ರಾರ್ಥಿಸಿದ್ದರಂತೆ. ಮಹೇಶ್ ಪ್ರಸಾದ್ ಅವರ ತಂದೆಯ ಪ್ರಾರ್ಥನೆಯ ಫಲವೆಂಬಂತೆ ಶ್ರೀ ಮಹಾಲಿಂಗೇಶ್ವರ ದೇವರು ಮಹೇಶ್ ಪ್ರಸಾದ್ ಅವರ ತಂದೆ ತಾಯಿಗೆ ಗಂಡು ಮಗುವಿನ ಪ್ರಸಾದವನ್ನು ಕರುಣಿಸಿದರು .ಶ್ರೀ ಮಹಾಲಿಂಗೇಶ್ವರ ದೇವರ ವರಪ್ರಸಾದ ಎಂಬಂತೆ ಮಹೇಶ್ ಪ್ರಸಾದ್ ರವರ ಹೆಸರಿನಲ್ಲಿ ಮಹೇಶ- ಪ್ರಸಾದ ಕಾಣಿಸಿಕೊಂಡಿದೆ .ಮನಸ್ಸಿನ ತುಡಿತವೂ ನಾಡಿ ಮಿಡಿತವು ಎಂಬಂತೆ 2003 ರಲ್ಲಿ ಪೊಲೀಸ್ ಇಲಾಖೆಗೆ ಸೇರಿ 2016 ರಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಆಗಿ ತಾನು ಹುಟ್ಟಿದ ಊರಾದ ಪುತ್ತೂರಿನಲ್ಲಿ ಕರ್ತವ್ಯ ನಿರ್ವಹಿಸಿ ಹೆಸರುವಾಸಿಯಾದವರು . ಪುತ್ತೂರು ಠಾಣೆಯಿಂದ ಕಾಪು ಠಾಣೆಗೆ ಕಳೆದ ಒಂದು ವರ್ಷದಿಂದ ಈಚೆಗೆ ಪುತ್ತೂರು ಠಾಣೆಯಿಂದ ವರ್ಗಾವಣೆಗೊಂಡು ಕಾಪು ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ .ಇವರ ಕರ್ತವ್ಯದ ಅವಧಿಯಲ್ಲಿ ಕಾಪು ಪರಿಸರದಲ್ಲಿ ಶಾಂತಿ ನೆಲೆಸಲಿ ಹಾಗೂ ಕಾನೂನು ಬಾಹಿರ ಚಟುವಟಿಕೆಗಳು ಮುಕ್ತವಾಗಲಿ ಎಂದು ಶುಭ ಹಾರೈಸೋಣ..