ಪಡುಬಿದ್ರಿ : ಚುನಾವಣೆಯ ಪ್ರಯುಕ್ತ ಪೋಲಿಸ್ ಪಥಸಂಚಲನ
Posted On:
11-04-2023 11:00PM
ಪಡುಬಿದ್ರಿ : ವಿಧಾನಸಭಾ ಚುನಾವಣೆಯ ಪ್ರಯುಕ್ತ ಪಡುಬಿದ್ರಿಯಲ್ಲಿ ಶಿರ್ವ, ಕಾಪು, ಪಡುಬಿದ್ರಿ ಪೋಲಿಸರು ಹಾಗೂ ಸಿ ಆರ್ ಪಿ ತಂಡದಿಂದ ಇಂದು ಸಂಜೆ ಪಥಸಂಚಲನ ನಡೆಯಿತು.
ಪಥಸಂಚಲನವು ಕಾರ್ಕಳ ರಸ್ತೆಯಿಂದ ಮೊದಲ್ಗೊಂಡು ಪಡುಬಿದ್ರಿ ಪೇಟೆಯ ಮಾರ್ಗವಾಗಿ ಪಡುಬಿದ್ರಿ ಮಹಾಲಿಂಗೇಶ್ವರ ದೇವಸ್ಥಾನದವರೆಗೆ ಸಾಗಿ ಹಿಂತಿರುಗಿದೆ.
ಈ ಸಂದರ್ಭ ಕಾರ್ಕಳ ಡಿ ವೈ ಎಸ್ ಪಿ ಅರವಿಂದ ಕಲಗುಜ್ಜಿ, ಕಾಪು ಪೊಲೀಸ್ ವೃತ್ತ ನಿರೀಕ್ಷಕ ಕೆ ಸಿ ಪುವಯ್ಯ, ಪಡುಬಿದ್ರಿ ಠಾಣಾಧಿಕಾರಿ ಪುರುಷೋತ್ತಮ್, ಶಿರ್ವ ಠಾಣಾಧಿಕಾರಿ ರಾಘವೇಂದ್ರ ಸಿ ಹಾಗೂ ಮೂರು ಠಾಣೆಯ ಪೊಲೀಸರು ಉಪಸ್ಥಿತರಿದ್ದರು.