ಉದ್ಯಾವರ : ಕ್ಷುಲ್ಲಕ ಕಾರಣಕ್ಕೆ ಹತ್ಯೆ
Posted On:
21-04-2023 11:57AM
ಉದ್ಯಾವರ : ಇಲ್ಲಿನ ಪಿತ್ರೋಡಿ ಸಮೀಪ ಮೀನುಗಾರನನ್ನು ಕೊಂದಿರುವ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ.
ಪಿತ್ರೋಡಿ ನಿವಾಸಿ ಮೀನುಗಾರಿಕೆ ಬೋಟ್ ಕಾರ್ಮಿಕ ದಯಾನಂದ ಸಾಲ್ಯಾನ್ (48) ಕೊಲೆಯಾದವರು. ಪಿತ್ರೋಡಿಯ ಬಾರ್ನಲ್ಲಿ ಮದ್ಯ ಸೇವಿಸುತ್ತಿದ್ದಾಗ ಪಕ್ಕದಲ್ಲಿ ಕುಳಿತಿದ್ದ ಸ್ಥಳೀಯ ನಿವಾಸಿ ಭರತ್ ಎಂಬಾತನ ಜತೆಗೆ ಯಾವುದೋ ಕಾರಣಕ್ಕೆ ಮಾತಿಗೆ ಮಾತು ಬೆಳೆದಿದೆ. ಬಳಿಕ ಬಾರ್ನಿಂದ ಹೊರಬಂದು ಜಗಳವಾಡಿಕೊಂಡಿದ್ದಾರೆ.
ಈ ಸಂದರ್ಭ ಭರತ್ ತನ್ನ ಪಂಚ್ನಿಂದ ದಯಾನಂದ ಮುಖಕ್ಕೆ ಹೊಡೆದಿದ್ದಾನೆ. ದಯಾನಂದ ನೆಲಕ್ಕೆ ಬಿದ್ದಾಗ ಓಡಿಹೋಗಿದ್ದಾನೆ. ಸ್ಥಳೀಯ ಭಜನೆ ತಂಡದವರು ದಯಾನಂದ ಅವರ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಆಸ್ಪತ್ರೆಗೆ ಒಯ್ದರೂ ದಯಾನಂದ ಮೃತಪಟ್ಟಿದ್ದಾರೆ. ಆರೋಪಿ ಭರತ್ನನ್ನು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.