ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪು : ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಗೆ ಸೇರ್ಪಡೆ

Posted On: 23-04-2023 05:11PM

ಕಾಪು: ಬಿಜೆಪಿ ಕಾರ್ಯಕರ್ತರಾದ ನಾಗಾರಾಜ್ ಸಾಲ್ಯಾನ್ ಮತ್ತು ರೋಷನ್ ಮುಳೂರು ಇಂದು ಕಾಂಗ್ರೆಸ್ ಸೇರ್ಪಡೆಗೊಂಡರು.

ಕಾಪು ರಾಜೀವ ಭವನದಲ್ಲಿ‌ ಕಾಪು ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆಯವರು ಕಾಂಗ್ರೆಸ್ ಧ್ವಜ‌ ನೀಡಿ‌ ಶಾಲು ಹಾಕಿ ನಾಗರಾಜ್ ಸಾಲ್ಯಾನ್ ಮತ್ತು ರೋಶನ್ ಮುಳೂರು ಅವರನ್ನು‌ ಪಕ್ಷಕ್ಕೆ ಬರಮಾಡಿಕೊಂಡರು.

ಪಕ್ಷದ ಮುಖಂಡರಾದ ದೇವಿ ಪ್ರಸಾದ್ ಶೆಟ್ಟಿ, ನವೀನ ಚಂದ್ರ ಸುವರ್ಣ, ದೀಪಕ್ ಎರ್ಮಾಳ್, ಶರ್ಫುದ್ದೀನ್, ಸತೀಶ್ಚಂದ್ರ ಮುಳೂರು, ಸುಶಾಂತ್ ಕುಮಾರ್ ಉಪಸ್ಥಿತರಿದ್ದರು.